ಮಂಗಳೂರು ಆಕಾಶವಾಣಿಯ 50ನೇ ವರ್ಷಾಚರಣೆಯ ಸಂದರ್ಭದ ದೇಶದ ಗಣರಾಜ್ಯೋತ್ಸವದ ಚಿಂತನ ಕಾರ್ಯಕ್ರಮ ಈ ವರ್ಷ ಮೂಡುಬಿದರೆಯ ರಾಜ್ಯ ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ರಾಜ್ಯ ಸಂಪನ್ಮೂಲ ವ್ಯಕ್ತಿ, ಹಿರಿಯ ಕಾರ್ಯನಿರತ ಪತ್ರಕರ್ತ ರಾಯಿ ರಾಜ ಕುಮಾರ ರಿಂದ ಮೂಡಿ ಬರಲಿದೆ.
ಬೆಳಗ್ಗೆ 6.30 ಕ್ಕೆ ಪ್ರಸಾರವಾಗುವ ಮಂಗಳೂರು ಆಕಾಶವಾಣಿಯ ಈ 5 ನಿಮಿಷದ ಚಿಂತನ ಭಾಷಣದಲ್ಲಿ ರಾಯಿ ರಾಜ ಕುಮಾರರು ದೇಶದ 77 ನೇ ಗಣರಾಜ್ಯೋತ್ಸವದ ವಿಚಾರಗಳನ್ನು ಮಂಡಿಸಿ ಶುಭ ಹಾರೈಸಿದ್ದಾರೆ.
