ಕಾರ್ಕಳ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾಬೆಟ್ಟು ಇದರ 40ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನಾ ಶೋಭಾಯಾತ್ರೆ ವಿಜೃಂಭಣೆಯಿಂದ ವಿವಿಧ ಚೆಂಡೆ, ನಾಸಿಕ ಬ್ಯಾಂಡ್, ಹುಲಿವೇಷ ಕುಣಿತ, ಭಜನಾ ತಂಡಗಳಿಂದ ಕುಣಿತ ಭಜನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ದೊಂದಿಗೆ ದಿನಾಂಕ 31 ರವಿವಾರ ದಂದು ಸಂಪನ್ನಗೊಂಡಿತು.
ಗಣೇಶೋತ್ಸವ ಸಮಿತಿ ಕಾಬೆಟ್ಟು ಇದರ ಅಧ್ಯಕ್ಷರಾದ ನವೀನ್ ದೇವಾಡಿಗ, ಕೃಷ್ಣ ದಾಸ್ ಶೆಣೈ ಸಮಿತಿಯ ಸದಸ್ಯರಾದ ಶೋಭಾ ಭಾಸ್ಕರ್, ಕೃಷ್ಣಪ್ಪ ಶೆಟ್ಟಿ, ದಿನೇಶ್ ಕುಂದರ್, ಲೋಕೇಶ್ ಸುರೇಶ್ ಹೆಗ್ಡೆ, , ಹಾಗೂ ಸರ್ವ ಸಮಿತಿಯ ಸರ್ವ ಸದಸ್ಯರು, ಊರ ಪರವೂರ ಭಕ್ತಾಧಿಗಳು ಭಾಗವಹಿಸಿದರು.

