ಸಂಸ್ಕಾರ ಭರಿತ ಶಿಕ್ಷಣದಿಂದ ಸತ್ ಪ್ರಜೆಗಳಾಗಿ ಬೆಳಗಲು ಸಾಧ್ಯ – ರಾಘವೇಂದ್ರ ಭಂಡಾರ್ಕರ್
ಮೂಡಬಿದಿರೆ : ಮಕ್ಕಳಿಗೆ ಶಾಲಾ ಪಠ್ಯ ಬೋಧನೆಯ ಜೊತೆಗೆ ಸಂಸ್ಕಾರಯುತವಾಗಿ ಶಿಕ್ಷಣ ನೀಡಿದಲ್ಲಿ ಮಾತ್ರ ಅವರು ಮುಂದೆ ಸತ್ ಪ್ರಜೆಗಳಾಗಿ ದೇಶವನ್ನು ಮುನ್ನಡೆಸಿ ಬೆಳಗಿಸುವಲ್ಲಿ ಮತ್ತು ಪ್ರದಾನ ಪಾತ್ರ ವಹಿಸುವುದರಲ್ಲಿ ಸಂಶಯವೇ ಇಲ್ಲ ಎಂದು ಜ್ಯೋತಿಷಿ ಮತ್ತು ವಾಸ್ತು ತಜ್ಞರಾದ ಮಾರೂರು ರಾಘವೇಂದ್ರ ಭಂಡಾರ್ಕರ್ ಅವರು ಅಭಿಪ್ರಾಯಪಟ್ಟರು.
ಶತಮಾನದ ಸಂಭ್ರಮದಲ್ಲಿರುವ ಇಲ್ಲಿನ ಕಡಲಕೆರೆಯ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸುವುದರ ಜೊತೆಗೆ ರಾಷ್ಟ್ರಮಟ್ಟದ ಚಿತ್ರ ಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡುತ್ತಾ ಮಕ್ಕಳಿಗೆ ಪಠ್ಯ ಪುಸ್ತಕದ ಶಿಕ್ಷಣದ ಜೊತೆಗೆ ಯಕ್ಷಗಾನ,ಚಿತ್ರಕಲೆ,ಕರಾಟೆ, ಭಗವದ್ಗೀತೆ, ಯೋಗ, ಸೂರ್ಯನಮಸ್ಕಾರ, ಪಂಚಾಂಗಶ್ರವಣ,ಭಕ್ತಿಗೀತೆ, ಮುಂತಾದ ಆಧ್ಯಾತ್ಮಿಕತೆಯ ಶಿಕ್ಷಣವನ್ನೂ ನೀಡಿ ಪ್ರೇರಣಾ ಶಾಲೆಯು ಜಿಲ್ಲೆಯಲ್ಲೇ ಮಾದರಿ ಶಿಕ್ಷಣ ಸಂಸ್ಥೆಯಾಗಿ ಎಲ್ಲರ ಗಮನ ಸೆಳೆಯುತ್ತಿದೆ.

ಈ ವಿದ್ಯಾಲಯದಲ್ಲಿನ ಶಿಸ್ತಿನ ಶಿಕ್ಷಣ ಮತ್ತು ಶಾಲಾಭಿವೃದ್ಧಿಯಲ್ಲಿ ಇಲ್ಲಿನ ಶಿಕ್ಷಕರ ಪಾತ್ರವನ್ನು ಮುಕ್ತಕಂಠದಿಂದ ಭಂಡಾರ್ಕರ್ ಅವರು ಶ್ಲಾಘಿಸಿದರು.
ಸಂಚಾಲಕ ಎಂ ಶಾಂತಾರಾಮ ಕುಡ್ವ ಅವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ವತ್ಸಲಾ ರಾಜೇಶ್ ಅವರು ಪ್ರಸ್ತಾಪಿಸಿ,ಸ್ವಾಗತಿಸಿ,ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು ಶಿಕ್ಷಕಿಯರಾದ ಶಶಿಕಲಾ ಕೋಟ್ಯಾನ್,ಶ್ರೀಮತಿ ಹರ್ಷಿತಾ ಉಪಸ್ಥಿತರಿದ್ದರು.
ರಾಷ್ಟ್ರಮಟ್ಟದಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಸಂಹಿತಾ ಡಿ ಪೈ (ದ್ವಿತೀಯ),ಓಂ ಶೆಟ್ಟಿ (ತೃತೀಯಾ) ಪ್ರಿಯಾ ಎಸ್ ಕೋಟ್ಯಾನ್ (ಚತುರ್ಥ),ರಾಜ್ಯ ಮಟ್ಟದಲ್ಲಿ ಆರಾಧ್ಯ ಶೆಟ್ಟಿ (ಪ್ರಥಮ),ಆಸ್ತಿಕ್ ನಾಯ್ಕ (ದ್ವಿತೀಯಾ), ಯದ್ವಿ (ತೃತೀಯ), ಮನ್ವಿತ್ (ಚತುರ್ಥ),ಜಿಲ್ಲಾ ಮಟ್ಟದಲ್ಲಿ ಆರಾಧ್ಯಪ್ರಭು (ದ್ವಿತೀಯಾ),ದೀಪಾಂಶ್ ಡಿ ಆಚಾರ್ಯ (ತೃತೀಯಾ) ಮನಸ್ವೀ ಶರ್ಮಾ((ಚತುರ್ಥ), ಮನ್ವಿತಾ ಪೂಜಾರಿ (ಆರನೇ) ಮತ್ತು ತಾಲ್ಲೂಕು ಮಟ್ಟದಲ್ಲಿ ಸಮರ್ಥ ಡಿ ಆಚಾರ್ಯ (ದ್ವಿತೀಯಾ),ಮನೀಷ್ ಪೂಜಾರಿ (ತೃತೀಯಾ)ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಕಲಾ ಸಾಧಕ ಮತ್ತು ಕಲಾ ಪ್ರಭ ಸ್ವರ್ಣ ಪದಕಗಳನ್ನು ರಾಘವೇಂದ್ರ ಭಂಡಾರ್ಕರ್ ಅವರು ಹಸ್ತಾಂತರಿಸಿ ಗೌರವಿಸಿದರು.
ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಅತ್ಯುತ್ತಮ ಕ್ರಿಯಾಶೀಲತೆಗಾಗಿ ನೀಡಲ್ಪಟ್ಟ ರಾಷ್ಟ್ರಮಟ್ಟದ ಉತ್ತಮ ಶಾಲೆ ಪ್ರಶಸ್ತಿ ಪಡೆದ ಪ್ರೇರಣಾ ವಿದ್ಯಾಲಯದ ಪರವಾಗಿ ಮುಖ್ಯೋಪಾಧ್ಯಾಯಿನಿ ವತ್ಸಲಾ ರಾಜೇಶ್ ರವರಿಗೆ ಪ್ರಶಸ್ತಿ ಪತ್ರ,ಪದಕಗಳನ್ನು ಶಾಂತಾರಾಮ ಕುಡ್ವ ಹಸ್ತಾಂತರಿಸಿ ಗೌರವಿಸಿದರು. ಪ್ರಾರಂಭದಲ್ಲಿ ಸರಸ್ವತಿ ದೇವಿ, ಭಾರತ ಮಾತೆ ಮತ್ತು ಓಂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಆರತಿ ಬೆಳಗಿಸಲಾಯ್ತು.

