ಮಂಗಳೂರು : ಪ್ರಭು ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ಗೌಡ ಸಾರಸ್ವತ ಬ್ರಾಹ್ಮಣರ ವಿದ್ಯಾರ್ಥಿವೇತನ ಲೀಗ್ (ಜಿಎಸ್ಬಿಎಲ್) ಸಹಯೋಗದೊಂದಿಗೆ, ಅಜಿತ್ ಪ್ರಭು ಫೌಂಡೇಶನ್, ಮಂಗಳೂರಿನಲ್ಲಿ ತನ್ನ 10 ನೇ ವಾರ್ಷಿಕ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವನ್ನು ಕೆನರಾ ಹೈಸ್ಕೂಲ್ನ ಭುವನೇಂದ್ರ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿತ್ತು. ಈ ವರ್ಷ 73 ವಿದ್ಯಾರ್ಥಿಗಳಿಗೆ ಒಟ್ಟು 42 ಲಕ್ಷ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನಗಳನ್ನು ನೀಡಲಾಯಿತು.
ಅತಿದೊಡ್ಡ ಖಾಸಗಿ ಸ್ವತಂತ್ರ ಎಂಜಿನಿಯರಿಂಗ್ ಸೇವೆಗಳ ಕಂಪನಿಯಾದ ಕ್ವೆಸ್ಟ್ ಗ್ಲೋಬಲ್ನ ಸಹ ಸಂಸ್ಥಾಪಕ ಮತ್ತು ಸಿಇಒ ಅಜಿತ್ ಪ್ರಭು ಪ್ರಾರಂಭಿಸಿದ ವಿದ್ಯಾರ್ಥಿವೇತನ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಮಹತ್ವಾಕಾಂಕ್ಷೆ ಮತ್ತು ದೀರ್ಘಕಾಲೀನ ಆಕಾಂಕ್ಷೆಗಳನ್ನು ಪೆÇೀಷಿಸುವ ಜತೆಜತೆಗೆ ಉನ್ನತ ಶಿಕ್ಷಣಕ್ಕೆ ಪ್ರವೇಶವನ್ನು ಸಕ್ರಿಯಗೊಳಿಸುವುದನ್ನು ಮುಂದುವರಿಸಿದೆ.
ಈ ಪ್ರತಿಷ್ಠಾನವು ಇಲ್ಲಿಯವರೆಗೆ 900 ಕ್ಕೂ ಹೆಚ್ಚು ವಿದ್ಯಾರ್ಥಿವೇತನಗಳ ಮೂಲಕ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸಬಲೀಕರಿಸಿದೆ. 1,000 ಪದವೀಧರರನ್ನು ಬೆಂಬಲಿಸುವ ಮತ್ತು ಕುಟುಂಬಗಳು ಹಾಗೂ ಸಮುದಾಯಗಳಲ್ಲಿ ಬಹುಮುಖಿ ಪರಿಣಾಮವನ್ನು ಸೃಷ್ಟಿಸುವ ತನ್ನ ದೊಡ್ಡ ದೃಷ್ಟಿಕೋನದ ನಿಟ್ಟಿನಲ್ಲಿ ಸ್ಥಿರವಾಗಿ ಪ್ರಗತಿ ಸಾಧಿಸುತ್ತಿದೆ. ವಿದ್ಯಾರ್ಥಿಗಳು ಕಠಿಣ ಆಯ್ಕೆ ಪ್ರಕ್ರಿಯೆಗೆ ಒಳಗಾಗುತ್ತಾರೆ. ಹಿಂದಿನ ಪರೀಕ್ಷೆಯ ಅಂಕಗಳು, ಪೆÇೀಷಕರ ಆದಾಯ ಮಟ್ಟ ಮತ್ತು ಪ್ರಶ್ನೆಗಳು ಮತ್ತು ವೈಯಕ್ತಿಕ ಸಂದರ್ಶನಗಳ ಮೂಲಕ ಅಳೆಯಲಾದ ವಿದ್ಯಾರ್ಥಿಯ ಸಾಮಥ್ರ್ಯವನ್ನು ಆಧರಿಸಿ ಅವರನ್ನು ಆಯ್ಕೆ ಮಾಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಕ್ವೆಸ್ಟ್ ಗ್ಲೋಬಲ್ನ ಸಹ-ಸಂಸ್ಥಾಪಕ ಮತ್ತು ಸಿಇಒ ಅಜಿತ್ ಪ್ರಭು, “ಶಿಕ್ಷಣವು ಒಬ್ಬ ವ್ಯಕ್ತಿಯನ್ನು ಮಾತ್ರವಲ್ಲದೆ ಇಡೀ ಕುಟುಂಬಗಳು ಮತ್ತು ಸಮುದಾಯಗಳನ್ನು ಪರಿವರ್ತಿಸುವ ಅಸಾಧಾರಣ ಶಕ್ತಿಯನ್ನು ಹೊಂದಿದೆ. ಈ ಉಪಕ್ರಮವು ನನಗೆ ತೀರಾ ಆಪ್ತ ಆಸಕ್ತಿಯ ವಿಷಯ. ನಾನು ಒಮ್ಮೆ ಪಡೆದ ಬೆಂಬಲವನ್ನು ಮುಂದಕ್ಕೆ ನೀಡುವ ನನ್ನ ಮಾರ್ಗವಾಗಿದೆ” ಎಂದು ಬಣ್ಣಿಸಿದರು.
ಈ ಕಾರ್ಯಕ್ರಮದ ಪ್ರಮುಖ ಅಂಶವೆಂದರೆ ಅಜಿತ್ ಪ್ರಭು ಅವರ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ, ಅಲ್ಲಿ ಅವರು ತಮ್ಮ ಪ್ರಯಾಣದ ಒಳನೋಟಗಳನ್ನು ಹಂಚಿಕೊಂಡರು ಮತ್ತು ಮಿತಿಗಳನ್ನು ಮೀರಿ ಯೋಚಿಸಲು, ಸವಾಲುಗಳನ್ನು ಸ್ವೀಕರಿಸಲು ಮತ್ತು ಶ್ರೇಷ್ಠತೆಯನ್ನು ಅನುಸರಿಸಲು ಅವರನ್ನು ಪೆÇ್ರೀತ್ಸಾಹಿಸಿದರು.

