ಉಪ್ಪೂರು ಭಾರೀ ಗಾಳಿ ಮಳೆಗೆ ಹಾನಿಯಾದ ಮನೆಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ.

0
7

ಉಪ್ಪೂರು ಗ್ರಾಮದಲ್ಲಿ ಮೊನ್ನೆ ಸುರಿದ ಭಾರೀ ಗಾಳಿ ಮಳೆಯಿಂದ ಹಾನಿಯಾದ ಮನೆಗಳಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರೊಂದಿಗೆ ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಿದರು

ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಗ್ಗೇಲ್ ಬೆಟ್ಟು ದಿ. ಮಹಾಬಲ ಪಡಿವಾಳ ಹಾಗೂ ನರ್ನಾಡು ವಿಶಾಲಾಕ್ಷಿ ಭಂಡಾರಿ ಯವರ ಮನೆ ಹಾನಿಗೀಡಾಗಿದ್ದು, ಮನೆಯವರಿಗೆ ತಮ್ಮ ವೈಯುಕ್ತಿಕ ನೆಲೆಯಲ್ಲಿ ಪರಿಹಾರ ಮೊತ್ತವನ್ನು ನೀಡಿದ ಶಾಸಕರು ಪ್ರಾಕೃತಿಕ ವಿಕೋಪದಡಿ ಕಂದಾಯ ಇಲಾಖೆಯ ಮೂಲಕ ಗರಿಷ್ಟ ಪರಿಹಾರ ಒದಗಿಸಲು ಕ್ರಮ ಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮಹೇಶ್ ಕೋಟ್ಯಾನ್, ಕೃಷ್ಣರಾಜ ಕೋಟ್ಯಾನ್, ಶ್ರೀ ರಾಜೇಶ್ ರಾವ್, ಶ್ರೀ ಧರಣೀಶ್, ಶ್ರೀಮತಿ ಸಾವಿತ್ರಮ್ಮ, ಸ್ಥಳೀಯ ಮುಖಂಡರಾದ ಶ್ರೀ ಸುನೀಲ್ ಶೆಟ್ಟಿ, ಶ್ರೀ ರಮೇಶ್ ಪೂಜಾರಿ, ಶ್ರೀ ಬಾಲಕೃಷ್ಣ ಶೆಟ್ಟಿ, ಶ್ರೀ ಉಮೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here