ವರದಿ- ರಾಯಿ ರಾಜ ಕುಮಾರ
ಮೂಡುಬಿದರೆ ಮೂಡುವೇಣುಪುರ ವೆಂಕಟರಮಣ ಮತ್ತು ಹನುಮಂತ ದೇವಸ್ಥಾನದಲ್ಲಿ ನಡೆದ ಲಕ್ಷದೀಪೋತ್ಸವ ಹಾಗೂ ಅವಬ್ರತೋತ್ಸವ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಹೆಸರಾಂತ ಸಂಸ್ಥೆಯಲ್ಲಿ ಆಡಳಿತಾಧಿಕಾರಿಯಾಗಿ, ಉಪನ್ಯಾಸಕರಾಗಿ, ಪತ್ರಿಕಾ ಮಾಧ್ಯಮದಲ್ಲಿಯೂ ದುಡಿಯುತ್ತಿರುವ ಗಣೇಶ್ ಕಾಮತ್ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿ ಹೆಸರು ಮಾಡಿರುವ ಶಾಂತರಾಮ ಕುಡ್ವ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಲ್ಕಿ ಮೂಡುಬಿದರೆ ಶಾಸಕ ಉಮಾನಥ ಕೋಟ್ಯಾನ್, ದೇವಾಲಯದ ಆಡಳಿತ ಮುಕ್ತೇಸರ ಜಿ ಉಮೇಶ್ ಪೈ, ಮನೋಜ್ ಶೆಣೈ, ಸುಧೀರ್ ಪೈ, ದಯಾನಂದ ಪೈ, ರಾಜೇಶ್ ಮಲ್ಯ, ಬೋಳ ವಿಶ್ವನಾಥ್ ಕಾಮತ್, ಮುರಳಿಧರ ಭಟ್ ಉಪಸ್ಥಿತರಿದ್ದರು.
.

