ಮೂಡುಬಿದಿರೆ : ಇಲ್ಲಿನ ಅಲಂಗಾರು ಜಂಕ್ಷನ್ ಬಳಿ ನಿವಾಸಿ ಪ್ರಭು ಕ್ಯಾಂಟೀನ್ ಮಾಲೀಕರಾಗಿ ಆಮ್ಲೆಟ್ ಪಾಂಡುರಂಗ ಮಾಮ ಎಂದೇ ಜನಪ್ರಿಯರಾಗಿದ್ದ ಜಿ.ಪಾಂಡುರಂಗ ಪ್ರಭು (67ವ) ಜ.28 ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ಗಂಜಿ ಊಟ ಮತ್ತು ಆಮ್ಲೆಟ್ ವ್ಯವಹಾರದಲ್ಲಿ ಅತೀ ಕಡಿಮೆ ದರದಲ್ಲಿ ಖಾದ್ಯವನ್ನು ಗ್ರಾಹಕರಿಗೆ ನೀಡುತ್ತಿದ್ದ ಪ್ರಭುಗಳು ಊರ ಮತ್ತು ಪರ ಊರ ಗಣ್ಯ ವ್ಯಕ್ತಿಗಳು ಕೂಡ ಬಂದು ಇಲ್ಲಿ ಆಹಾರ ಸೇವಿಸುತ್ತಿದ್ದರು.
ಮೃತರು ಪತ್ನಿ, ಓರ್ವ ಪುತ್ರ ,ಪುತ್ರಿ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅವರು ಅಗಲಿದ್ದಾರೆ . ಭಾರತ್ ಜಾಗರಣ ಮಂಚ್ ನ ರಾಜ್ಯ ಪ್ರಮುಖ ಶಿವ ಭಂಡಾರ್ಕರ್ ರವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ .

