ಮೂಡುಬಿದಿರೆ: ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲ್ಲೂಕು ಘಟಕದ ಆಶ್ರಯದಲ್ಲಿ ನಡೆಯಲಿರುವ ದ್ವಿತೀಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ.
ಈ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಸಾಮಾಜಿಕ ಮುಂದಾಳು ಸುಚರಿತ ಶೆಟ್ಟಿಯವರ ಮುಂದಾಳತ್ವ ದಲ್ಲಿ . ಫೆಬ್ರವರಿ 21ರಂದು ಕಡಂದಲೆ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಅಧ್ಯಕ್ಷರಾದ ವೇಣುಗೋಪಾಲ ಶೆಟ್ಟಿ. ಕೆ, ಕಾರ್ಯದರ್ಶಿ. ಸದಾನಂದ ನಾರಾವಿ, ಸಂಘಟನಾ ಕಾರ್ಯದರ್ಶಿಗಳಾದ ಯತಿರಾಜ್ ಶೆಟ್ಟಿ ಮತ್ತು ಮಹಾದೇವ ಮೂಡುಕೊಣಾಜೆ, ಟಿ ಎನ್ ಕೆಂಬಾರೆ ಅಧ್ಯಕ್ಷರು ನಿವೃತ್ತ ಸರಕಾರಿ ನೌಕರರ ಸಂಘ ಮೂಡಬಿದಿರೆ, ಉದಯ ಪೂಜಾರಿ, ರಶ್ಮಿ ರಾಜೇಶ್, ಸುಜಿತ್ ಅಮೀನ್, ರಾಕೇಶ್ ಪೂಜಾರಿ, ಜಗದೀಶ್ ಪೂಜಾರಿ ಪೂಪಾಡಿಕಲ್ಲು ಉಪಸ್ಥಿತರಿದ್ದರು.

