ಮೂಡುಬಿದರೆ: ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ತಾಲೂಕು ಕಚೇರಿಯಲ್ಲಿ ಸಪ್ಟಂಬರ್ 17ರಂದು ಆಚರಿಸಲಾಯಿತು.
ಸರಕಾರಿ ಕಾರ್ಯಕ್ರಮದ ಪ್ರಯುಕ್ತ ನಡೆದ ಈ ಸಭೆಯನ್ನು ಉದ್ದೇಶಿಸಿ ಮಾಜಿ ಸಚಿವ ಅಭಯಚಂದ್ರ ಜೈನ್, ಪುರಸಭಾ ಅಧ್ಯಕ್ಷ ಜಯಶ್ರೀ, ನಾಗರಾಜ ಪೂಜಾರಿ, ಮಾತನಾಡಿ ವಿಶ್ವಕರ್ಮ ಜಯಂತಿಯ ಉದ್ದೇಶಗಳನ್ನು ತಿಳಿಸಿದರು. ವೇದಿಕೆಯಲ್ಲಿ ಸಬ್ ಇನ್ಸೆಕ್ಟರ್ ನವೀನ್, ಪುರಸಭಾ ಮುಖ್ಯಾಧಿಕಾರಿ ಇಂದು, ಪತ್ರಕರ್ತ ಸಂಘದ ಅಧ್ಯಕ್ಷ ಸೀತಾರಾಮ್ ಆಚಾರ್ಯ, ಉಪತಹಸಿಲ್ದಾರರಾದ ಬಾಲಚಂದ್ರ ಹಾಜರಿದ್ದರು. ಉಪತಹಸಿಲ್ದಾರ್ ರಾಮ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದ್ದರು.
ವರದಿ ರಾಯಿ ರಾಜ ಕುಮಾರ ಮೂಡುಬಿದಿರೆ

