ಮುಲ್ಕಿ: ಸೇವಾ ಮನೋಭಾವ ಬೆಳೆಸಿಕೊಳ್ಳಿ- ಡಾ.ಹರಿಕೃಷ್ಣ ಪುನರೂರು

0
21


ಮುಲ್ಕಿ : ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಸೇವಾ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮುಲ್ಕಿ ಬಿಲ್ಲವ ಮಹಾ ಮಂಡಲದಲ್ಲಿ ನಡೆಯಿತು. ನಿಯೋಜಿತ ದ್ವಿತೀಯ ಉಪ ರಾಜ್ಯಪಾಲರಾದ ಲ.ಎಚ್ಎಂ ತಾರನಾಥ್ ರವರು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಕಳೆದ ಮೂರು ವರ್ಷಗಳಿಂದ ಸತತವಾಗಿ ಸೇವಾ ಕಾರ್ಯಕ್ರಮಗಳನ್ನು ಜರಗಿಸಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿ ರಾರಾಜಿಸುತ್ತಿದ್ದು ಪ್ರಸ್ತುತ ವರ್ಷದ ನೂತನ ಅಧ್ಯಕ್ಷ ಲ.ಅನಿಲ್ ಕುಮಾರ್, ಕಾರ್ಯದರ್ಶಿ ಲ.ಅಶ್ವಿನಿ ಪ್ರಸಾದ್, ಕೋಶಾಧಿಕಾರಿ ಲ ಸಂತೋಷ್ ಕುಮಾರ್ ಹಾಗೂ ಪದಾಧಿಕಾರಿಗಳಿಗೆ ಮತ್ತು ನೂತನ ಸದಸ್ಯರಿಗೆ ಪದಗ್ರಹಣ ನೆರವೇರಿಸಿ ಪ್ರಮಾಣವಚನ ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಲಯನ್ಸ್ ರಾಜ್ಯಪಾಲ, ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ ಸೇವಾ ಸಂಸ್ಥೆಗಳು ಮನೋರಂಜನೆಗಾಗಿ ಅಲ್ಲ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಹಾಯ ಹಸ್ತದ ಮೂಲಕ ಮಾದರಿಯಾಗಿ ಸಂಸ್ಥೆಯ ಒಳಿತಿಗಾಗಿ ಶ್ರಮಿಸಿ ಸೇವಾ ಮನೋಭಾವನೆ ಬೆಳೆಸಿಕೊಳ್ಳಿ ಎಂದರು.
ವೇದಿಕೆಯಲ್ಲಿ ಲಯನ್ಸ್ ವಲಯ ಅಧ್ಯಕ್ಷರುಗಳಾದ ರೋಷನ್ ಡಿಸೋಜಾ, ಉಮೇಶ್ ಶೆಟ್ಟಿ, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ ಹೆಬ್ಬಾರ್ , ಪ್ರತಿಭಾ ಹೆಬ್ಬಾರ್, ಮಾಜೀ ಅಧ್ಯಕ್ಷ ಶಿವಪ್ರಸಾದ್, ಎಕ್ಸಟೆನ್ಶನ್ ಚೇರ್ಮನ್ ಓಸ್ವಾಲ್ಡ್ ಡಿಸೋಜಾ ನಿಕಟ ಪೂರ್ವ ರಾಜ್ಯಪಾಲರಾದ ಡಾಕ್ಟರ್ ಮೇಲ್ವಿನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here