ಪರ್ಕಳ, ಡಿ. 30 : ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳ, ಉಡುಪಿ ಇದರ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ ಸಂಗೀತ ಶಿಬಿರಕ್ಕೆ ಸೋಮವಾರ ಸಂಜೆ ಚಾಲನೆ ನೀಡಲಾಯಿತು. ಶಿಬಿರವನ್ನು ಎಂ.ಐ.ಟಿ.ಯ ಪ್ರೊ| ಶಣ್ಮುಖರಾಜ್ ಮೂರೂರು ಮತ್ತು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ವಿದುಷಿ ತೇಜಸ್ವಿನಿ ಎಂ.ಕೆ. ಬೆಂಗಳೂರು ಶಿಬಿರ ನಡೆಸಿಕೊಟ್ಟರು. ಸರಿಗಮ ಭಾರತಿ ಸಂಗೀತ ವಿದ್ಯಾಲಯದ ನಿರ್ದೇಶಕ ಡಾ|| ಉದಯಶಂಕರ್ ಎಚ್.ಎನ್., ಸಂಗೀತ ಗುರು ವಿದುಷಿ ಉಮಾಶಂಕರಿ ಉಪಸ್ಥಿತರಿದ್ದರು.


