ಮೈಸೂರು: ಪರೀಕ್ಷಾ ಸ್ಪೂರ್ತಿ ಫೌಂಡೇಶನ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆ. ೩ರಂದು ಬೆಳಿಗ್ಗೆ 10ಕ್ಕೆ ಸರಸ್ವತಿಪುರಂನಲ್ಲಿರುವ ಜೆ.ಎಸ್.ಎಸ್.ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಎನ್.ಕೆ. ಕುಲಾಲ್ ಅವರಿಗೆ ರಾಜ್ಯ ಮಟ್ಟದ ಪರೀಕ್ಷಾ ಸ್ಪೂರ್ತಿ ಗುರು ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಗುರು ಶ್ರೇಷ್ಠ ಪ್ರಶಸ್ತಿ – 2025ಕ್ಕೆ ಪ್ರಶಾಂತಿ ವಿದ್ಯಾಕೇಂದ್ರ ಬಾಯಾರು ವಿದ್ಯಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎನ್.ಕೆ.ಕುಲಾಲ್. ಬೇಕೂರು,ಈ ಪ್ರಶಸ್ತಿಗೆ ಭಾಜನರಾಗಿದ್ದು, ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಇವರು ಕಲಿಸಿದ ಪ್ರಶಾಂತಿ ವಿದ್ಯಾರ್ಥಿಗಳು 7ವಿದ್ಯಾರ್ಥಿಗಳಿಗೆ 100ರಲ್ಲಿ 100ಅಂಕ ಗಳಿಸಿದ್ದು ಕನ್ನಡ ವಿಷಯಕ್ಕೆ ಗರಿಮೆಯಾಗಿದೆ. ಕನ್ನಡ ಸಾಹಿತ್ಯದಲ್ಲೂ ಸಾಧನೆ ಮಾಡಿದ್ದಾರೆ, ಉತ್ತಮ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿರುವ ಇವರು ನಿರೂಪಕರು, ಗಾಯಕರು ಸಾಹಿತ್ಯ ಬರಹಗಾರರು, ಆಗಿ, ಹಲವಾರು ಸಂಸ್ಥೆ ಗಳಲ್ಲಿ ಕಾರ್ಯಕ್ರಮ ನೀಡಿದ ಸಂಗೀತ, ಸಾಂಸ್ಕೃತಿಕ ಗಳಲ್ಲಿ ಇತ್ತೀಚೆಗೆ ‘ಸ್ವರ ರತ್ನ’ ಪ್ರಶಸ್ತಿ ಪಡೆದಿರುತ್ತಾರೆ. ಗಡಿನಾಡ ಪ್ರದೇಶಕ್ಕೆ ಇದೊಂದು ಹೆಮ್ಮೆಯ ಗರಿಯಾಗಿದೆ.