ನವಕಿರಣ್ ನವತಾರೆ ವೇದಿಕೆಯ ವತಿಯಿಂದ ಅನಾರೋಗ್ಯ ಪೀಡಿತ ಮಗುವಿಗೆ ಧನ ಸಹಾಯ ನೀಡಲಾಯಿತು.
ಸಾಸ್ತಾನ ಪಾಂಡೆಶ್ವರದ ಕೊಂಚಿಗೆರೆ ರಸ್ತೆಯ ಬಡ ಕುಟುಂಬದ ನಿವಾಸಿಗಳಾದ ಜಯಕುಮಾರ ವಸಂತಿ ದಂಪತಿಗಳ 13 ವರ್ಷದ ಮಗಳು ಕುಮಾರಿ ಪ್ರದನ್ಯ ನಳು ಆನಾರೋಗ್ಯ ಸಮಸ್ಯೆಯಿಂದ ಬಳಲುತಿದ್ದು ಚಿಕ್ಸಿತಾ ವೆಚ್ಚವಾಗಿ ನವಕಿರಣ್ ನವತಾರೆ ಸೇವಾವೇದಿಕೆಯ ವತಿಯಿಂದ ವೇದಿಕೆಯ ಅಧ್ಯಕ್ಷರಾದ ಕುಸುಮ ಮನೋಜ್ ಅವರ ಮುಖೇನ 5 ಸಾವಿರ ನಗದು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಚಾಲಕ ಉಮೇಶಪೂಜಾರಿ, ಸಾಂಸ್ಕತಿಕ ನಿರ್ದೇಶಕಿ ಹೇಮಲತಾ ನಾಯಕ್, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಇದರ ಮಾಜಿ ಅಧ್ಯಕ್ಷರಾದ ಮನೋಜ್ ಕುಮಾರ ಹಾಗೂ ಲೀಲಾವತಿ ಗಂಗಾಧರ್, ಅಂಗನವಾಡಿ ಶಿಕ್ಷಕಿಯರು, ಸಹಾಯಕಿ, ಆರೋಗ್ಯ ಇಲಾಖೆಯ ಸಹಾಯಕರು ಹಾಗೂ ಪೋಷಕರು ಉಪಸ್ಥಿತರಿದ್ದರು.