ಮಂಗಳೂರು : ISO ಪ್ರಮಾಣೀಕರಣ ಹೊಂದಿರುವ ಮತ್ತು 163 ವರ್ಷಗಳ ವಿಶ್ವಾಸಾರ್ಹ ಸಂಪ್ರದಾಯ ಹೊಂದಿರುವ ಆಭರಣ ಸಮೂಹ ಬಾಬಿ ಚೆಮ್ಮನೂರು ಇಂಟರ್ನ್ಯಾಷನಲ್ ಜ್ಯುವೆಲ್ಲರ್ಸ್, ಕರ್ನಾಟಕದ ಮಂಗಳೂರಿನಲ್ಲಿ ತನ್ನ ಹೊಸ ಶೋರೂಮ್ ಅನ್ನು ತೆರೆಯುತ್ತಿದೆ. ಈ ಶೋರೂಮ್ ಅನ್ನು ಮಾರ್ಚ್ 22 ರ ಭಾನುವಾರ ಸಂಜೆ 5 ಗಂಟೆಗೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ.
ಬಾಲಿವುಡ್ ರಂಗದ ತಾರೆಯರಾದ ಸೈಫ್ ಅಲಿ ಖಾನ್ ಮತ್ತು ಇಮ್ರಾನ್ ಹಶ್ಮಿ, ಉಪೇಂದ್ರ ರಾವ್ (ಕನ್ನಡ ನಟ) ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಈ ಸಂದರ್ಭವನ್ನು ಆಶೀರ್ವದಿಸಲಿದ್ದಾರೆ. ಬೊಚೆ (812 ಕಿ.ಮೀ. ಓಟದ ವಿಶಿಷ್ಟ ವಿಶ್ವ ದಾಖಲೆ ಮತ್ತು ವಿಶ್ವ ಶಾಂತಿಗಾಗಿ ಗಿನ್ನೆಸ್ ದಾಖಲೆ ಹೊಂದಿರುವವರು) ಉಪಸ್ಥಿತಿ ಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಯು.ಟಿ.ಖಾದರ್ (ಸ್ಪೀಕರ್) ವಜ್ರ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಚಿನ್ನ ಮತ್ತು ವಜ್ರದ ಆಭರಣಗಳ ಉದ್ಘಾಟನಾ ಮಾರಾಟವನ್ನು ಕ್ರಮವಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ (ಲೋಕಸಭಾ ಸದಸ್ಯ) ಮತ್ತು ಶ್ರೀ ಡಿ. ವೇದವ್ಯಾಸ್ ಕಾಮತ್ (ಕರ್ನಾಟಕ ವಿಧಾನಸಭೆ ಸದಸ್ಯ) ನೆರವೇರಿಸಲಿದ್ದಾರೆ. ಐವನ್ ಡಿʼಸೋಜಾ (ವಿಧಾನ ಪರಿಷತ್ ಸದಸ್ಯ, ಕರ್ನಾಟಕ ಸರ್ಕಾರ) ಅದೃಷ್ಟಶಾಲಿ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ಮನೋಜ್ ಕುಮಾರ್ (ಮಾಜಿ ಮೇಯರ್, ಮಂಗಳೂರು ಎಂಸಿಸಿ) ಮತ್ತು ಶ್ರೀಮತಿ ಪೂರ್ಣಿಮಾ (ಮಾಜಿ ಉಪ ಮೇಯರ್) ಸನ್ಮಾನ ಮಾಡಲಿದ್ದಾರೆ. ಅನಿಲ್ ಸಿ.ಪಿ. (ಮಾರ್ಕೆಟಿಂಗ್ ಜನರಲ್ ಮ್ಯಾನೇಜರ್, ಬಾಬಿ ಚೆಮ್ಮನೂರು ಇಂಟರ್ನ್ಯಾಷನಲ್ ಗ್ರೂಪ್) ಸ್ವಾಗತ ಭಾಷಣ ಮಾಡಲಿದ್ದಾರೆ. ಉದ್ಘಾಟನಾ ದಿನದಂದು ಮಂಗಳೂರಿನ ಆಯ್ದ ಬಡ ರೋಗಿಗಳಿಗೆ ಬೋಚೆ ಫ್ಯಾನ್ಸ್ ಚಾರಿಟೇಬಲ್ ಟ್ರಸ್ಟ್ನ ವತಿಯಿಂದ ಆರ್ಥಿಕ ಸಹಾಯ ವನ್ನು ಬೋಚೆ ವಿತರಿಸಲಿದ್ದಾರೆ
ಶೋರೂಮ್ʼನಲ್ಲಿ HUID 916 ಚಿನ್ನ ಮತ್ತು ವಿಶ್ವ ದರ್ಜೆಯ ವಜ್ರಗಳು ಮತ್ತು ಬೆರಗುಗೊಳಿಸುವ ಬೆಳ್ಳಿ ಆಭರಣಗಳ ವ್ಯಾಪಕ ಸಂಗ್ರಹವಿದೆ. ಗ್ರಾಹಕರು HUID 916 ಚಿನ್ನದ ಆಭರಣಗಳನ್ನು ಸಗಟು ದರದಲ್ಲಿ ಖರೀದಿಸಬಹುದು. ಕತ್ತರಿಸದ ಮತ್ತು ಅಮೂಲ್ಯ ಆಭರಣಗಳ ಮೇಕಿಂಗ್ ಚಾರ್ಜ್ನಲ್ಲಿ 50% ವರೆಗೆ ರಿಯಾಯಿತಿ. ಎರಡು ಲಕ್ಷ ರೂಪಾಯಿಗಿಂತ ಹೆಚ್ಚಿನ ಕತ್ತರಿಸದ ವಜ್ರದ ಪ್ರತಿ ಖರೀದಿಯೊಂದಿಗೆ ಚಿನ್ನದ ನಾಣ್ಯವನ್ನು ಉಚಿತವಾಗಿ ಪಡೆಯಿರಿ.
ಗ್ರಾಹಕರು ಮುಂಗಡ ಬುಕಿಂಗ್ ಮೂಲಕ ಶುಲ್ಕವಿಲ್ಲದೆ ಚಿನ್ನದ ಆಭರಣಗಳನ್ನು ಖರೀದಿಸಬಹುದು. ಹಗುರವಾದ ವಜ್ರದ ಆಭರಣಗಳ ಇತ್ತೀಚಿನ ಸಂಗ್ರಹವನ್ನು ಖರೀದಿಸಿ. ಪ್ರತಿ ಖರೀದಿಯೊಂದಿಗೆ ಖಚಿತ ಉಡುಗೊರೆಗಳು. ಶೋರೂಮ್ ಹಂಪನಕಟ್ಟೆಯ ಕ್ಲಾಕ್ ಟವರ್ ಬಳಿ ಇದೆ.

