ಮೂಡುಬಿದಿರೆ: “ಅಕ್ಷರ ಸಂತ”, 2021 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ಹರೆಕಳ ಹಾಜಬ್ಬ ಅವರು ಕಡಂದಲೆಯ ಡಿ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭಾನುವಾರ ಭೇಟಿ ನೀಡಿ ಮಕ್ಕಳ ಜತೆ ಬೆರೆತರು.
ಈ ಸಂದಭ೯ದಲ್ಲಿ ನಿಲಯದ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.
ನಿಲಯದ ಮೇಲ್ವೀಚಾರಕ ಅರುಣ್ ಕುಮಾರ್, ಅಡುಗೆ ಸಿಬಂದಿಗಳಾದ ಸಂತೋಷ ಮಲ್ಲನಗೌಡ ಬಿರಾದಾರ, ಮಂಜುನಾಥ ಭೀಮನಗೌಡ ಬಿರಾದಾರ, ಮಂಜುನಾಥ ತೋಟಪ್ಪ ಹೊನ್ಯಾಳ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.