ಎಸ್‌.ಸಿಎಸ್‌ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೋಷಕ–ಬೋಧಕ–ವಿದ್ಯಾರ್ಥಿ ಸಭೆ – ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಪೋಷಕರ ಸಹಕಾರ ಅಗತ್ಯ

0
81


ಎಸ್‌.ಸಿಎಸ್‌ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಘಟಕದ ವತಿಯಿಂದ 2025–26ನೇ ಶೈಕ್ಷಣಿಕ ವರ್ಷದ ಅಸಮ ಸೆಮಿಸ್ಟರ್‌ಗಳಿಗೆ ಸಂಬಂಧಿಸಿದ ಪೋಷಕ–ಬೋಧಕ–ವಿದ್ಯಾರ್ಥಿ ಸಭೆ ರಿವರ್‌ಸೈಡ್ ಕ್ಯಾಂಪಸ್‌ನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುಚಿತ್ರಾ ಪಿ. ಶೆಟ್ಟಿ ಅವರು ಕಾಲೇಜಿನ ಮಧ್ಯಂತರ ವರದಿ ಹಾಗೂ ವಿವಿಧ ಶೈಕ್ಷಣಿಕ–ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಪ್ರಸ್ತುತಪಡಿಸಿದರು.
ಪ್ರಾಂಶುಪಾಲರಾದ ಶ್ರೀ ಹಾರ್ದಿಕ್ ಪಿ. ಚೌಹಾಣ್ ಅವರು ಪೋಷಕರನ್ನು ಉದ್ದೇಶಿಸಿ ಮಾತನಾಡಿ, “ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗೆ ಪೋಷಕರ ನಿರಂತರ ಸಹಕಾರ ಮತ್ತು ಆಸಕ್ತಿ ಅತ್ಯಂತ ಮುಖ್ಯ. ಕಾಲೇಜು–ಪೋಷಕರು–ವಿದ್ಯಾರ್ಥಿಗಳ ಸಂಯುಕ್ತ ಪ್ರಯತ್ನವೇ ಯಶಸ್ಸಿಗೆ ದಾರಿ” ಎಂದು ಸಲಹಾ ಭಾಷಣ ನೀಡಿದರು.
ಎಲ್ಲಾ ವಿಭಾಗದ ಮುಖ್ಯಸ್ಥರು 2025–26ನೇ ಸಾಲಿನ ಪಿ.ಟಿ.ಎ ಸಲಹಾ ಸಮಿತಿಯ ಪೋಷಕರ ಪ್ರತಿನಿಧಿಗಳನ್ನು ಅಧಿಕೃತವಾಗಿ ದೃಢಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌.ಸಿಎಸ್‌ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಶ್ರೀ ಯು.ಕೆ. ಖಾಲಿದ್ ವಹಿಸಿದ್ದರು.ನಮ್ಮ ವಿದ್ಯಾರ್ಥಿಗಳ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ನಡೆನುಡಿಗಳ ಬೆಳವಣಿಗೆಗೆ ಪೋಷಕರು ಮತ್ತು ಶಿಕ್ಷಕರು ಒಟ್ಟಾಗಿ ಕೈ ಜೋಡಿಸುವುದು ಅತ್ಯಂತ ಮುಖ್ಯ. ನಮ್ಮ ಕಾಲೇಜಿನ ಪ್ರಗತಿಗೆ ನಿಮ್ಮ ಸಹಕಾರ, ಸೂಚನೆಗಳು ಮತ್ತು ವಿಶ್ವಾಸವೇ ದೊಡ್ಡ ಶಕ್ತಿ ಎಂದು ಅಧ್ಯಕ್ಷೀಯ ನುಡಿಯಲ್ಲಿ ತಿಳಿಸಿದರು‌.
ಆಹಾರ, ಪೋಷಣಾ ಮತ್ತು ಆಹಾರವಿಜ್ಞಾನ ವಿಭಾಗದ ಮುಖ್ಯಸ್ಥೆ ಹಾಗೂ ಆಂತರಿಕ ಗುಣಮಟ್ಟದ ಭರವಸೆ ಕೋಶದ ಸಂಯೋಜಕಿ ಶ್ರೀಮತಿ ರೂಪಾ ರಾವ್ ಅವರು ಸ್ವಾಗತ ಭಾಷಣ ಮಾಡಿದರು.
ಗಣಕ ವಿಭಾಗ ಸಹಾಯಕ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿ ಪರಿಷತ್ತಿನ ಸದಸ್ಯರಾದ ಶ್ರೀ ಮಾಧವ .ಕೆ ವಂದಿಸಿದರು.
ಕನ್ನಡ ವಿಭಾಗದ ಉಪನ್ಯಾಸಕಿ ಕು. ಸರಸ್ವತಿ ಚಿನ್ನಕಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.
ಔಪಚಾರಿಕ ಸಭೆಯ ನಂತರ ಪ್ರತಿ ತರಗತಿ ಮಟ್ಟದಲ್ಲಿ ಪೋಷಕರ–ವಿದ್ಯಾರ್ಥಿಗಳ ಹಾಗೂ ಬೋಧಕರ ನಡುವೆ ನೇರ ಸಂವಾದಗಳು ನಡೆಯಿತು. ವಿದ್ಯಾರ್ಥಿಗಳ ವಿದ್ಯಾ ಪ್ರಗತಿ ಹಾಗೂ ಸಾಧನೆಗಳ ವಿಮರ್ಶೆ ನಡೆಯಿತು. ಸಂಬಂಧಿತ ಶೈಕ್ಷಣಿಕ ವರ್ಷದ ತರಗತಿ ಸಲಹೆಗಾರರು ನೆರವೇರಿಸಿದರು.

LEAVE A REPLY

Please enter your comment!
Please enter your name here