ಕರ್ನಾಟಕ ಸರಕಾರದಿಂದ ಜನಸಾಮಾನ್ಯರಿಗೆ ನೀಡುತ್ತಿರುವ ಸರಕಾರಿ ಸೇವೆಗಳನ್ನು ಕಠಿಣಗೊಳಿಸಿರುವುದನ್ನು ತಕ್ಷಣದಿಂದಲೇ ಕೈ ಬಿಡುವಂತೆ ಸರಕಾರವನ್ನು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
9&11ಂ, ಖಾತಾ, ಪ್ಲಾಟಿಂಗ್ ಸಮಸ್ಯೆ, ಮನೆಯ ನಂಬರ್, ವಸತಿ ಯೋಜನೆ, ಸಂಧ್ಯಾ ಸುರಕ್ಷಾ, ಮರಳು ಮತ್ತು ಕೆಂಪುಕಲ್ಲು ಸಾಗಾಣಿಕೆ, 94ಸಿ ಅಡಿಯಲ್ಲಿ ಹಕ್ಕು ಪತ್ರ ಸಮಸ್ಯೆಗಳು ಹಾಗೂ ಸರಕಾರದ ಬ್ರಷ್ಟಾಚಾರದ ಬಗ್ಗೆ ಬಿಜೆಪಿಯ ದ.ಕ ಜಿಲ್ಲಾ ಸದಸ್ಯರಾದ ನ್ಯಾಯವಾದಿ ಎಂ ಬಾಹುಬಲಿ ಪ್ರಸಾದ್ ಮಾತನಾಡಿದರು. ಪುತ್ತಿಗೆಯ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ನಾಗವರ್ಮ ಜೈನ್, ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷರು ಶಶಿಧರ್ ಪಿ ನಾಯಕ್, ಗ್ರಾಮ ಪಂಚಾಯತ್ನ ಸದಸ್ಯರು ದಿನೇಶ್ ಗೌಡ, ಸುಮ ಭಟ್, ಸಾರಿಕಾ ಆಚಾರ್ಯ, ಅಪ್ಪಿ ಹಾಗೂ ಇತರ ಸದಸ್ಯರು. ಬಿಜೆಪಿಯ ಕಾರ್ಯಕರ್ತರಾದ ಶಶಿಧರ್ ಎಸ್ ಅಂಚನ್ ಎನಿಕ್ರಿಪಲ್ಲ, ನಾಗರಾಜ ಕರ್ಕೇರ, ಉದಯಕುಮಾರ್ ಶೆಟ್ಟಿ, ಪ್ರಭಾಕರ ಕುಲಾಲ್, ಕಿಶೋರ್ ಕುಮಾರ್, ಸಚಿನ್ ಭಟ್, ಗಿರಿಶ್ ಹಂಡೇಲ್ ಹಾಗೂ ಇತರರು ಭಾಗವಹಿಸಿದರು.
ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳಿಗೆ ಆಗ್ರಹ ಪತ್ರವನ್ನು ಗ್ರಾಮಪಂಚಾಯತ್ನ ಸಿಬ್ಬಂಧಿ ಮೂಲಕ ಹಸ್ತಾಂತರಿಸಲಾಯಿತು.
Home Uncategorized ಪುತ್ತಿಗೆ ಗ್ರಾಮ ಪಂಚಾಯತ್ನಲ್ಲಿ ಕಾಂಗ್ರೇಸ್ ನೇತೃತ್ವದ ಕರ್ನಾಟಕ ಸರ್ಕಾರದ ವಿರುದ್ಧ ಪ್ರತಿಭಟನೆ