ಅತ್ಯಾಚಾರ ಆರೋಪ ಪ್ರಕರಣ., ಶಾಸಕ ಮುನಿರತ್ನ ಬಿಗ್ ರಿಲೀಫ್

0
109

ವರದಿ: ಮಂದಾರ ರಾಜೇಶ್ ಭಟ್ ತುಳುನಾಡು ವಾರ್ತೆ

ಬೆಂಗಳೂರು:-ನಗರದಲ್ಲಿ ನಡೆದ ಆರ್‌ಎಂಸಿ ಯಾರ್ಡ್ ಮಹಿಳೆ ಅತ್ಯಾಚಾರ ಆರೋಪ ಪ್ರಕರಣವು ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಅಂದು ಮೂಡಿಸಿತ್ತು. ಆದರೆ ಇದೀಗ ಈ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದೆ. ಶಾಸಕರಾದ ಮುನಿರತ್ನ ವಿರುದ್ಧ ದಾಖಲಾದ ಆರೋಪಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಎಸ್‌ಐಟಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದೆ ಎಂದು ಬೆಂಗಳೂರಿನ ಮಾಧ್ಯಮಗಳು ವರದಿ ಮಾಡಿವೆ.

ಮಾತ್ರೆ ಸೇವಿಸಿದ ಬಳಿಕ ನಿದ್ರೆ ಮಾತ್ರ ಸೇವಿಸಿದ ನಂತರ ದೌರ್ಜನ್ಯ ನಡೆದಿದೆ ಎಂದು ಮಹಿಳೆಯ ದೂರಿದ್ದಳು ಆದರೆ ತನಿಖೆಯ ವೇಳೆ ಮಹಿಳೆಯ ದೇಹದಲ್ಲಿ ಯಾವುದೇ ನಿದ್ರಾಮಾತ್ರೆಯ ಅಂಶ ಪತ್ತೆಯಾಗಿಲ್ಲ. ಇದಲ್ಲದೆ ಆಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಬಾರಿ ರಿಹರ್ಸಲ್ ಮಾಡಿರುವುದು ಬಹಿರಂಗವಾಗಿದೆ. ಹೀಗಾಗಿ ಆರೋಪಗಳಿಗೆ ತಕ್ಕ ರೀತಿಯ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲವೆಂದು ಎಸ್‌ಐಟಿ ಸ್ಪಷ್ಟಪಡಿಸಿದೆ.

ಶಾಸಕ ಮುನಿರತ್ನ ತಮ್ಮ ಮೇಲಿನ ಆರೋಪ ಸುಳ್ಳು ಎಂದು ಪ್ರಕರಣ ರದ್ದುಪಡಿಸಲು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದ್ದು, ಮುನಿರತ್ನ ಪರ ವಕೀಲರು ಎಸ್‌ಐಟಿ ಸಲ್ಲಿಸಿರುವ ಬಿ ರಿಪೋರ್ಟ್ ಕುರಿತು ಕೋರ್ಟಿಗೆ ಮಾಹಿತಿ ನೀಡಿದರು. ಈ ನಡುವೆ ಬಂಧಿಸದಂತೆ ನೀಡಿದ್ದ ಮಧ್ಯಂತರ ತಡೆಯನ್ನು ಹೈಕೋರ್ಟ್ ವಿಸ್ತರಿಸಿದೆ. ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ

LEAVE A REPLY

Please enter your comment!
Please enter your name here