ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಮುಂಡಾಜೆ ಮನೆಯ ಸೀತಾರಾಮ ಪೂಜಾರಿ ಹಾಗೂ ಹೇಮಲತಾ ದಂಪತಿಯವರ ಪ್ರಥಮ ಪುತ್ರರಾದ ಎಸ್. ಶಿವರಾಜ್ರವರು ದೈವಾರಾಧನೆಯಲ್ಲಿ ಹಿರಿಯರ ಶುಭಾರ್ಶಿವಾದದೊಂದಿಗೆ ಪರಂಪರಿಕವಾಗಿ ಸರಿಸುಮಾರು 15 ವರ್ಷಗಳ ಕಾಲ ಮಧ್ಯಸ್ಥಿಕೆಯನ್ನು ನಡೆಸುತ್ತಾ, ದೈವದ ಹಾಗೂ ದೈವಗಳ ಪ್ರತಿಷ್ಠೆ, ಪರಿಕರಗಳ ಸಮರ್ಪಣೆ ಹಾಗೂ ಇನ್ನಿತರ ದೈವದ ಕಲದ ಎಲ್ಲಾ ಸೇವೆಗಳನ್ನು ನಡೆಸುತ್ತಾ ಬರುತ್ತಿದ್ದು, ಹಲವು ಕುಟುಂಬಗಳೊಂದಿಗೆ ಆತ್ಮೀಯವಾಗಿ ಬೆರೆತುಕೊಂಡು, ಹಲವು ದುರಿತಗಳನ್ನು ನೀವಾರಿಸಿ, ತುಳುನಾಡಿನಲ್ಲಿ ದೈವಾರಾಧನೆಯಲ್ಲಿ ಲೋಪಗಳು ಬಾರದಂತೆ ಈ ಹಿಂದಿನ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿದ್ದಾರೆ.

