ಕಲಾಕುಂಚ ಅತ್ತಿಗೆರೆ ಗ್ರಾಮೀಣ ಪ್ರದೇಶದ ಶಾಖೆಯ ಅಧ್ಯಕ್ಷರಾಗಿ ಶೈಲಜಾ ಪ್ರಶಾಂತ್ ಅಯ್ಕೆ

0
55

ದಾವಣಗೆರೆ-ಜನವರಿ – ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ದಾವಣಗೆರೆ ಜಿಲ್ಲೆಯ ಅತ್ತಿಗೆರೆ ಗ್ರಾಮೀಣ ಪ್ರದೇಶದ ಶಾಖೆಯ ಅಧ್ಯಕ್ಷರಾಗಿ ಶೈಲಜಾ ಪ್ರಶಾಂತ್ ಆಯ್ಕೆಯಾಗಿದ್ದಾರೆ ಎಂದು ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ಕೇರಳ ರಾಜ್ಯ ಸೇರಿದಂತೆ ಮೈಸೂರು, ಶಿರ್ಶಿ ದಾವಣಗೆರೆ ವಿವಿಧ ಬಡಾವಣೆಗಳಲ್ಲಿ ಶಾಖೆ ಇದ್ದು ಈ ಗ್ರಾಮೀಣ ಪ್ರದೇಶದ ಶಾಖೆ ಅಪರೂಪ ಅತ್ತಿಗೆರೆ ಗ್ರಾಮದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಇದ್ದವರು ಹೆಚ್ಚಿನ ಸಂಖ್ಯೆಯಲ್ಲಿ ಕಲಾಕುಂಚ ಆಜೀವ ಸದಸ್ಯರಾಗಬೇಕಾಗಿದೆ ಎಂದು ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ. ಸದ್ಯದಲ್ಲೇ ಅತ್ತಿಗೆರೆ ಗ್ರಾಮೀಣ ಪ್ರದೇಶದ ಶಾಖೆ ಉದ್ಘಾಟನೆ ಯಾಗಲಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು, ಸರ್ವ ಸದಸ್ಯರು ಪ್ರಕಟಿಸಿದ್ದಾರೆ.

LEAVE A REPLY

Please enter your comment!
Please enter your name here