ಅಂಡಿಂಜೆ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರ ಜಲ ಮಂಗಳ ಕಾರ್ಯಕ್ರಮದಡಿಯಲ್ಲಿ ವೇಣೂರು ವಲಯದ ಅಂಡಿಂಜೆ ಕಾರ್ಯಕ್ಷೇತ್ರದ ಸಾಹಿತ್ಯ ಸ್ವಸಹಾಯ ಸಂಘದ ಸದಸ್ಯರಾದ ಪ್ರವೀಣ್ ರವರು ಬೈಕ್ ಅಪಘಾತದಲ್ಲಿ ಕಾಲಿಗೆ ಬಲವಾದ ಪೆಟ್ಟು ಬಿದ್ದು ನಡೆದಾಡಲು ಅಸಾಧ್ಯವಾದುದರಿಂದ ಇವರಿಗೆ ಮಂಜೂರಾದ ವೀಲ್ ಕಮಡೋ ಚಯರನ್ನು ಒಕ್ಕೂಟದ ಉಪಾಧ್ಯಕ್ಷರಾದ ಜಯಾನಂದ ಕುಲಾಲ್ ರವರು ವಿತರಿಸಿದರು. ಈ ಸಂದರ್ಭದಲ್ಲಿ ನಾರಾವಿ ವಲಯದ ಮೇಲ್ವಿಚಾರಕರಾದ ಶಾಲಿನಿ ಹಾಗೂ ಗ್ರಾಮದ ಸೇವಾ ಪ್ರತಿನಿಧಿಯಾದ ಭಾಗ್ಯ ನವೀನ್ ಉಪಸ್ಥಿತರಿದ್ದರು.

