ಶ್ರೀ ದೇವಕಿ ಕೃಷ್ಣ ರವಳನಾಥ ದೇವಸ್ಥಾನ ಕಾರ್ಕಳ ; ಮಹಾ ಚಂಡಿಕಾ ಯಾಗ ಸಂಪನ್ನ

0
29

 ಶ್ರೀ ದೇವಕಿ ಕೃಷ್ಣ ರವಳನಾಥ ದೇವಸ್ಥಾನ  ತೆಳ್ಳಾರು ರಸ್ತೆ, ಕಾರ್ಕಳ  ಆಶ್ವಿಜ ಮಾಸದ (ಚತುರ್ದಶಿ) ಹುಣ್ಣಿಮೆ ಕಾರ್ಯಕ್ರಮದ ಅಂಗವಾಗಿ ಸಾನಿಧ್ಯ ಹವನ ,   “ದ್ವಾದಶ ಕಲಶಾಭಿಷೇಕ” ಪಂಚಾಮೃತ ಅಭಿಷೇಕ ವನ್ನು ದೇವಳದ ಪ್ರಧಾನ ಅರ್ಚಕರಾದ ಗಣಪತಿ ಭಟ್ ನೆರವೇರಿಸಿದರು.                                                                                                                                                                                                      ಶ್ರೀ ದುರ್ಗಾ ದೇವಿಯ ಸಾನಿಧ್ಯದ  ಚಂಡಿಕಾ ಹವನ ಮಂಟಪದಲ್ಲಿ  ಅ . 06 ರಂದು  ಚಂಡಿಕಾ ಯಾಗ ಧಾರ್ಮಿಕ ಪೂಜಾ ವಿಧಾನಗಳನ್ನು ವೇ . ಮೂ , ಸಂದೀಪ್ ಭಟ್  ನೇತೃತ್ವದಲ್ಲಿ ನೆಡೆಯಿತು , ಸೇವಾದಾರದ ಶ್ರೀಮತಿ ಚಂದ್ರಕಲಾ ,ದೇವದಾಸ್ ಕಾಮತ್ ಉಡುಪಿ  ಪೂಜಾ ಕಾರ್ಯದಲ್ಲಿ ಸಹಕರಿಸಿದರು.                                                                                                                                                                            ಶ್ರೀದೇವರ ಸನ್ನಿಧಿಯಲ್ಲಿ ಸಮೂಹಿಕ ಪ್ರಾರ್ಥನೆ  ,ಶ್ರೀ  ದೇವಿಗೆ ವಿಶೇಷ  ಅಲಂಕಾರ , ಸಮೂಹಿಕ ನಮಸ್ಕಾರ  , ಚಂಡಿಕಾ ಹೋಮದ ಪೂರ್ಣಹುತಿ , ಸುಹಾಸನಿ ಪೂಜೆ  , ಕುಮಾರಿ ಪೂಜೆ  , ದಂಪತಿ ಪೂಜೆ  , ಪಲ್ಲಪೂಜೆ ಮಹಾಪೂಜೆಯ ಬಳಿಕ  ಸಮಾರಾಧನೆ ಜರಗಿತು , ರಾತ್ರಿ  ಶ್ರೀ ದೇವಕಿ ಕೃಷ್ಣ  ರವಳನಾಥ ದೇವರಿಗೆ ಹೂವಿನ ಪೂಜೆ  , ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ರಂಗ ಪೂಜೆ  , ಪ್ರಸಾದವಿತರಣೆ ನಡೆಯಿತು. 

ಸಮಾರಂಭದಲ್ಲಿ  ದೇವಳದ ಆಡಳಿತ ಮಂಡಳಿಯ ಸದಸ್ಯರಾದ ಟಿ  ಸುಧಾಕರ್ ಪ್ರಭು  , ಎನ್ ರಾಮನಾರಾಯಣ ಪ್ರಭು  , ವಿನೋದ್ ಪ್ರಭು  , ಆರ್ ವಸಂತ್ ಪ್ರಭು  , ಅರ್ಚಕರು  ಹಾಗೂ ನೂರಾರು ಸಮಾಜ ಬಾಂದವರು ಉಪಸ್ಥರಿದ್ದರು. 

LEAVE A REPLY

Please enter your comment!
Please enter your name here