
ಶ್ರೀ ದೇವಕಿ ಕೃಷ್ಣ ರವಳನಾಥ ದೇವಸ್ಥಾನ ತೆಳ್ಳಾರು ರಸ್ತೆ, ಕಾರ್ಕಳ ಆಶ್ವಿಜ ಮಾಸದ (ಚತುರ್ದಶಿ) ಹುಣ್ಣಿಮೆ ಕಾರ್ಯಕ್ರಮದ ಅಂಗವಾಗಿ ಸಾನಿಧ್ಯ ಹವನ , “ದ್ವಾದಶ ಕಲಶಾಭಿಷೇಕ” ಪಂಚಾಮೃತ ಅಭಿಷೇಕ ವನ್ನು ದೇವಳದ ಪ್ರಧಾನ ಅರ್ಚಕರಾದ ಗಣಪತಿ ಭಟ್ ನೆರವೇರಿಸಿದರು. ಶ್ರೀ ದುರ್ಗಾ ದೇವಿಯ ಸಾನಿಧ್ಯದ ಚಂಡಿಕಾ ಹವನ ಮಂಟಪದಲ್ಲಿ ಅ . 06 ರಂದು ಚಂಡಿಕಾ ಯಾಗ ಧಾರ್ಮಿಕ ಪೂಜಾ ವಿಧಾನಗಳನ್ನು ವೇ . ಮೂ , ಸಂದೀಪ್ ಭಟ್ ನೇತೃತ್ವದಲ್ಲಿ ನೆಡೆಯಿತು , ಸೇವಾದಾರದ ಶ್ರೀಮತಿ ಚಂದ್ರಕಲಾ ,ದೇವದಾಸ್ ಕಾಮತ್ ಉಡುಪಿ ಪೂಜಾ ಕಾರ್ಯದಲ್ಲಿ ಸಹಕರಿಸಿದರು. ಶ್ರೀದೇವರ ಸನ್ನಿಧಿಯಲ್ಲಿ ಸಮೂಹಿಕ ಪ್ರಾರ್ಥನೆ ,ಶ್ರೀ ದೇವಿಗೆ ವಿಶೇಷ ಅಲಂಕಾರ , ಸಮೂಹಿಕ ನಮಸ್ಕಾರ , ಚಂಡಿಕಾ ಹೋಮದ ಪೂರ್ಣಹುತಿ , ಸುಹಾಸನಿ ಪೂಜೆ , ಕುಮಾರಿ ಪೂಜೆ , ದಂಪತಿ ಪೂಜೆ , ಪಲ್ಲಪೂಜೆ ಮಹಾಪೂಜೆಯ ಬಳಿಕ ಸಮಾರಾಧನೆ ಜರಗಿತು , ರಾತ್ರಿ ಶ್ರೀ ದೇವಕಿ ಕೃಷ್ಣ ರವಳನಾಥ ದೇವರಿಗೆ ಹೂವಿನ ಪೂಜೆ , ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ರಂಗ ಪೂಜೆ , ಪ್ರಸಾದವಿತರಣೆ ನಡೆಯಿತು.
ಸಮಾರಂಭದಲ್ಲಿ ದೇವಳದ ಆಡಳಿತ ಮಂಡಳಿಯ ಸದಸ್ಯರಾದ ಟಿ ಸುಧಾಕರ್ ಪ್ರಭು , ಎನ್ ರಾಮನಾರಾಯಣ ಪ್ರಭು , ವಿನೋದ್ ಪ್ರಭು , ಆರ್ ವಸಂತ್ ಪ್ರಭು , ಅರ್ಚಕರು ಹಾಗೂ ನೂರಾರು ಸಮಾಜ ಬಾಂದವರು ಉಪಸ್ಥರಿದ್ದರು.