ಮಂಡ್ಯ : ಐತಿಹಾಸಿಕ ಶ್ರೀ ಮೇಲುಕೋಟೆ ಚೆಲುವನಾರಾಣ ಸ್ವಾಮಿ ದೇವಳದ ಶಾಸ್ತ್ರೀಯ ಸಂಗೀತ ನೃತ್ಯ ವೇದಿಕೆ, ಅಖಿಲ ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟ ಆಯೋಜಿಸಿದ್ದ ಸರಣಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟ್ಯಾಂಕುರ ಪರ್ಫಾಮಿಂಗ್ ಆಟ್ಸ್ ಸಂಸ್ಥೆಯ ಗುರು ಬಿ. ನಾಗೇಶ್ ಶಿಷ್ಯವೃಂದದವರಿಂದ ಶ್ರೀ ಕೃಷ್ಣ ರಾಸಲೀಲೆ ನೃತ್ಯ ರೂಪಕ ಪ್ರದರ್ಶನ ನಡೆಯಿತು.
ಅಖಿಲ ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟದ ಸಂಚಾಲಕರಾದ ಹೆಚ್.ವಿ. ಶ್ರೀಲಕ್ಷ್ಮೀ ತೇಜಸ್ ಕಲಾವಿದರನ್ನು ಸನ್ಮಾನಿಸಿದರು.

