ಉಡುಪಿ ; ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಬ್ರಹ್ಮಾವರ , ಇಲ್ಲಿನ ಶ್ರೀ ಲಕ್ಷ್ಮಣಪೂರ್ವಜ: ಜಪ ಕೇಂದ್ರದಲ್ಲಿ ಅ 18 ರ ಶನಿವಾರ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೆಯ ಸ್ವಾಮೀಜಿಯವ ಮಠ ಪರಂಪರೆಯ 550 ವರ್ಷದ ಆಚರಣೆಯ ಪ್ರಯುಕ್ತ ಸಂಕಲ್ಪಿತಾಃ 550 ಕೋಟಿ ಶ್ರೀ ರಾಮ ನಾಮ ಜಪ ಅಭಿಯಾನವು 550 ದಿನ ಪೂರೈಸಿದ ಮಂಗಲೋತ್ಸವ ಸಂಭ್ರಮಾಚರಣೆ ಅಂಗವಾಗಿ ಶ್ರೀ ದೇವರ ಸನ್ನಿಧಿಯಲ್ಲಿ ವಾಯುಸ್ತುತಿ ಹವನ ನೆಡೆಯಿತು ಶ್ರೀ ದೇವರ ಸನ್ನಿಧಿಯಲ್ಲಿ ಸಮೂಹಿಕ ಪ್ರಾರ್ಥನೆ , ವಾಯುಸ್ತುತಿ ಹವನದ ಧಾರ್ಮಿಕ ಪೂಜಾ ಕಾರ್ಯಗಳು ವೇ . ಮೂ . ಕೆ ದಯಾನಂದ ಭಟ್, ಚೆಂಪಿ ಪ್ರಕಾಶ್ ಭಟ್ , ಪ್ರಧಾನ ಅರ್ಚಕರು ಬಿ ಪಾಂಡುರಂಗ ಭಟ್ ಮಾರ್ಗದರ್ಶನದಲ್ಲಿ ಅರ್ಚಕವೃಂದವರು ನಡೆಸಿಕೊಟ್ಟರು.
ದೇವರಿಗೆ ವಿಶೇಷ ಅಲಂಕಾರ , ಶ್ರೀ ರಾಮ ನಾಮ ಜಪ ಪಠಣ , ಪೂರ್ಣಾಹುತಿ ಬಳಿಕ ಮಹಾಪೂಜೆ , ವಾಯುಸ್ತುತಿ ಹವನದ ಕುರಿತು ಪ್ರವಚನವನ್ನು ಬ್ರಹ್ಮಾವರ ರಾಮಕೃಷ್ಣ ಭಟ್ ನೆಡೆಸಿಕೊಟ್ಟರು ಬಳಿಕ ಪಲ್ಲಪೂಜೆ , ಪ್ರಸಾದ ವಿತರಣೆ , ಸಮಾರಾಧನೆ ಜರಗಿತು.
ದೇವಳದ ಆಡಳಿತ ಮೊಕ್ತೇಸರಾದ ಕೆ ನರೇಂದ್ರ ಪೈ, ಬಿ ಪಿ ಗೋಪಾಲಕೃಷ್ಣ ಪೈ, ಸೇವಾದಾರದ ಬ್ರಹ್ಮಾವರ ಭಟ್ ಅರ್ಚಕ ಕುಟುಂಬಸ್ಥರು ಹಾಗೂ ರಾಮ ನಾಮ ಜಪ ಅಭಿಯಾನ ಸಮಿತಿಯ ಸಂಚಾಲಕ ಬಿ ಪಿ ಮೋಹನದಾಸ ಪೈ ರಾಮ ನಾಮ ಜಪ ಅಭಿಯಾನ ಸಮಿತಿಯ ಪದಾಧಿಕಾರಿಗಳು , ಜಿ ಎಸ್ ಬಿ ಮಹಿಳಾ ಮಂಡಳಿ , ಜಿ ಎಸ್ ಬಿ ಯುವಕ ಮಂಡಳಿಯ ಸದಸ್ಯರು ಸಹಕರಿಸಿದರು , ನೂರಾರು ಸಮಾಜಬಾಂಧವರು ಉಪಸ್ಥರಿದ್ದರು.

