27-03-2026 ರಂದು ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ (ರಿ) ಕರ್ನಾಟಕ ಹಾಗೂ ಶ್ರೀರಾಮ ಸೇನೆ ವತಿಯಿಂದ ಶ್ರೀ ರಾಮನವಮಿ ಆಚರಣೆ ಮಾಡಲಾಯಿತು.
ಹಾಸನ ಜಿಲ್ಲೆ ಅರಕಲಗೂಡು ತಾಲೂಕು ರಾಮನಾಥಪುರ ಹೋಬಳಿ ಕಾಳೇನಹಳ್ಳಿ ಗ್ರಾಮದಲ್ಲಿ ಮಜ್ಜಿಗೆ,ಪಾನಕ ಮತ್ತು ಕೋಸಂಬರಿಯನ್ನು ರಾಮನನ್ನು ನೆನೆಯುತ್ತಾ ಭಕ್ತಾದಿಗಳಿಗೆ ವಿತರಿಸಲಾಯಿತು.
ಈ ಸಮಾರಂಭದಲ್ಲಿ ಹಾಸನ ಜಿಲ್ಲೆಯ ಶ್ರೀರಾಮ ಸೇನೆಯ ಕಾರ್ಯಧ್ಯಕ್ಷರಾದ ಪುನೀತ್ ಕೆ.ಕೆ.ಯವರು ಅರಕಲಗೂಡು ಅಧ್ಯಕ್ಷರಾದ ಮಂಜು ಕೆ ಅವರು ಹಾಸನ ಜಿಲ್ಲಾಸಹ ಕಾರ್ಯದರ್ಶಿ, ಅಮಿತ್ ಕೆ ಎನ್ ಅವರು ಹಾಗೂ ಊರಿನ ಮುಖಂಡರು ಭಾಗವಹಿಸಿದ್ದರು.

