ಪೆರ್ಡೂರು : ಉಡುಪಿ ಜಿಲ್ಲಾಮಟ್ಟದ ಪ್ರತಿಭಾಕಾರಂಜಿಯ ತುಳು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವರ್ಷಿಣಿ ಕುಲಾಲ್, ಫೆ. 7ರಂದು ಕೊಪ್ಪಳದಲ್ಲಿ ನಡೆಯುವ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತುಳು ಭಾಷಣ ಸ್ಪರ್ಧೆಯಲ್ಲಿ ಸ್ಪರ್ಧಿಸಲಿರುವರು. ಸರಕಾರಿ ಪದವಿಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ಹೆಬ್ರಿ ಇಲ್ಲಿನ ಹತ್ತನೆಯ ತರಗತಿ ವಿದ್ಯಾರ್ಥಿನಿ ವರ್ಷಿಣಿ ಪೆರ್ಡೂರು ಗ್ರಾಮದ ಕೆಳಮುಳ್ಳುಗುಡ್ಡೆ ರವಿಕುಲಾಲ್ ಮತ್ತು ಮಮತಾ ಕುಲಾಲ್ ದಂಪತಿಗಳ ಪುತ್ರಿ.

