ದಾವಣಗೆರೆಯ ಆಧ್ಯಾತ್ಮ ಪರಂಪರೆಯ ಕ್ರಿಯಾತ್ಮಕ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಆಶ್ರಯದಲ್ಲಿ ಪ್ರತೀ ತಿಂಗಳು ಹುಣ್ಣಿಮೆಯಂದು ನಿರಂತರ ೨೫ ವರ್ಷಗಳಿಂದ ನಡೆದು ಬಂದ ಶ್ರೀ ಗಾಯತ್ರಿ ಪೂಜೆ ಉಪಾಸನೆ ಈ ತಿಂಗಳ ಗುರು ಪೌರ್ಣಿಮೆ ಪ್ರಯುಕ್ತ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದ ಸಭಾಂಗಣದಲ್ಲಿ ನಡೆದ ಈ ಧಾರ್ಮಿಕ ಸೇವೆ ಪೂಜೆ ಸುಸಂಪನ್ನಗೊAಡಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ಶೆಣೈ ತಿಳಿಸಿದ್ದಾರೆ.
ಶ್ರೀ ಗಾಯಿತ್ರಿ ಪರಿವಾರದ ಅಧ್ಯಕ್ಷರಾದ ಡಾ. ರಮೇಶ್ ಪಟೇಲ್ರವರ ಕುಟುಂಬದ ಈ ತಿಂಗಳ ಪೂಜೆಯಲ್ಲಿ ಪರಿವಾರದ ಸಂಚಾಲಕರಾದ ಸತೀಶ್ ಆರ್.ಎಂ., ಖಜಾಂಚಿ ಪುರುಷೋತ್ತಮ ಪಟೇಲ್, ಸಮಿತಿ ಸದಸ್ಯರಾದ ಶೈಲ ವಿಜಯಕುಮಾರ್ ಶೆಟ್ಟಿ ದಂಪತಿಗಳು, ಎಂ.ಎಸ್.ಪ್ರಸಾದ್, ವೀರಭದ್ರಪ್ಪ ದಂಪತಿಗಳು, ಬಿ.ಸತ್ಯನಾರಾಯಣ ಮೂರ್ತಿ, ವಿ.ಕೃಷ್ಣಮೂರ್ತಿ, ಹರಿಸುಮಂತ್ ಮುಂತಾದವರು ಉಪಸ್ಥಿತರಿದ್ದರು.