ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷರಾಗಿ ಸುಜಿ ಕುರ್ಯ

0
114


ಉಡುಪಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವಿಜಯ ಕರ್ನಾಟಕ ಹಿರಿಯ ವರದಿಗಾರ ಸುಬ್ರಹ್ಮಣ್ಯ ಜಿ.ಭಟ್​(ಸುಜಿ ಕುರ್ಯ), ಪ್ರಧಾನ ಕಾರ್ಯದರ್ಶಿಯಾಗಿ ನಝೀರ್​ ಪೊಲ್ಯ ಹಾಗೂ ಕೋಶಾಧಿಕಾರಿಯಾಗಿ ಹರೀಶ್​ ಕುಂದರ್​ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ವಾರ್ತಾಧಿಕಾರಿ ಮಂಜುನಾಥ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಪಾಧ್ಯಕ್ಷರಾಗಿ ಪ್ರಭಾಕರ ಆಚಾರ್ಯ ಚಿತ್ತೂರು, ಉದಯ ಕುಮಾರ್​ ಮುಂಡ್ಕೂರು, ಉದಯ ಕುಮಾರ್​ ಶೆಟ್ಟಿ, ಕಾರ್ಯದರ್ಶಿಗಳಾಗಿ ಉಮೇಶ್​ ಮಾರ್ಪಳ್ಳಿ, ಸುರೇಶ್​ ಎಮಾರ್ಳ್​ ಹಾಗೂ ಟಿ.ಲೋಕೇಶ್​ ಆಚಾರ್ಯ ತೆಕ್ಕಟ್ಟೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಮೂವರು ಸ್ಪರ್ಧಿಸಿದ್ದು, ಉದಯವಾಣಿ ಫೋಟೋ ರ್ಜನಲಿಸ್ಟ್​ ಆಸ್ಟ್ರೊ ಮೋಹನ್​ 44 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರು: ಪ್ರಜ್ವಲ್​ ಅಮೀನ್​, ಜನಾರ್ದನ ಕೊಡವೂರು, ಚೇತನ್​ ಮಟಪಾಡಿ, ಮುಹಮ್ಮದ್​ ಶರೀಫ್​, ರಮಾನಂದ ಅಜೆಕಾರು, ಯೋಗೀಶ್​ ಕುಂಭಾಶಿ, ಬಿ.ರಾಘವೇಂದ್ರ ಪೈ, ಕೆ.ಚಂದ್ರಶೇಖರ್​ ಚಾಲುಕ್ಯ, ಪ್ರಮೋದ್​ ಸುವರ್ಣ, ವಿಜಯ ಆಚಾರ್ಯ, ಪ್ರವಿಣ್​ ಮುದ್ದೂರು, ಮೋಹನ್​ ಉಡುಪ, ಸುಕುಮಾರ್​ ಮುನಿಯಾಲು.

LEAVE A REPLY

Please enter your comment!
Please enter your name here