‘ತೆಲಿಕೆ – ನಲಿಕೆ’ : ತುಳುಭವನದಲ್ಲಿ ಏ.13ರಿಂದ ಮಕ್ಕಳಬೇಸಿಗೆ ಶಿಬಿರ

0
7

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಏಪ್ರಿಲ್ 13 ರಿಂದ ಏಪ್ರಿಲ್ 18 ರ ವರೆಗೆ ‘ತೆಲಿಕೆ-ನಲಿಕೆ’ ಮಕ್ಕಳ ಬೇಸಿಗೆ ಶಿಬಿರವನ್ನು ಮಂಗಳೂರಿನ ಉರ್ವಾಸ್ಟೋರ್‌ನಲ್ಲಿರುವ ತುಳುಭವನದಲ್ಲಿ ಆಯೋಜಿಸಿದೆ.

4ನೇ ತರಗತಿಯಿಂದ 8ನೇ ತರಗತಿ (9ರಿಂದ 13 ವರ್ಷದ) ವಿದ್ಯಾರ್ಥಿಗಳಿಗೆ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ಇರುತ್ತದೆ. ಶಿಬಿರದಲ್ಲಿ ವಿದ್ಯಾರ್ಥಿಗಳಿಗಾಗಿ ತುಳುನಾಡಿನ ಜಾನಪದ ಕಥೆ, ತುಳು ಹಾಡು, ಕುಣಿತ, ಚಿತ್ರಕಲೆ, ನಾಟಕದ ಬಗ್ಗೆ ತರಬೇತಿ ನೀಡಲಾಗುವುದು.

ಶಿಬಿರವು ಪೂರ್ಣ ಉಚಿತವಾಗಿದ್ದು, ಆಸಕ್ತರು ರೂ.100/- ನೋಂದಾವಣಿ ಶುಲ್ಕ ಪಾವತಿಸಿ, ಏಪ್ರಿಲ್ 10 ರೊಳಗೆ ತುಳು ಭವನದಲ್ಲಿ ಹೆಸರು ನೋಂದಾಯಿಸುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.

ಶಿಬಿರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ಮೊಬೈಲ್ ಸಂಖ್ಯೆ 7411572115 ಸಂಪರ್ಕಿಸುವಂತೆ ಅಕಾಡೆಮಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here