ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ, ಉಡುಪಿ ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ತಮ್ಮ ಗುರುಗಳಾದ ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಆಚರಣೆಯ ಈ ಶುಭಸಂದರ್ಭದಲ್ಲಿ ಶ್ರೀಗುರುಗಳ ಅನುಗ್ರಹಕ್ಕಾಗಿ ಸೆ . 30 ರಂದು ಸಂಜೆ ಮಂಗಳವಾದ್ಯದೊಂದಿಗೆ “ಸ್ವರ್ಣ ಪಾದುಕ” ದಿಗ್ವಿಜಯ ಯಾತ್ರೆ ‘ ಸ್ವಾಮಿಯ ಭಾವ ಚಿತ್ರವನ್ನು ಮೆರವಣಿಗೆಯಲ್ಲಿ ಸಾಗಿ ದೇವಳಕ್ಕೆ ತರಲಾಯಿತು , ಭಕ್ತರೂ ಅಲ್ಲಲ್ಲಿ ಆರತಿ ನೀಡಿ ಪೂಜೆ ಸಲ್ಲಿಸಿದರು ದೇವಳದಲ್ಲಿ ಶ್ರೀ ಮಠದ ಅರ್ಚಕರು “ಸ್ವರ್ಣ ಪಾದುಕ” ಪೂಜೆ ನೆಡೆಸಿ ಪ್ರಸಾದ ವಿತರಣೆ ಮಾಡಿ ಭಕ್ತರೋ ತಮ್ಮ ತಮ್ಮ ಮನೆಗಳಲ್ಲಿ “ಸ್ವರ್ಣ ಪಾದುಕ” ಪೂಜೆ ಸಲ್ಲಿಸುವಂತೆ ವಿನಂತಿಸಿದರು
ಸಮಾರಂಭದಲ್ಲಿ ಆಡಳಿತ ಮೊಕ್ತೇಸರ ಪಿ ವಿ ಶೆಣೈ , ಉಮೇಶ್ ಪೈ , ವಸಂತ ಕಿಣೆ , ಗಣೇಶ್ ಕಿಣಿ , ಅಶೋಕ ಬಾಳಿಗ , ಭಾಸ್ಕರ್ ಶೆಣೈ , ದಯಾಘನ್ ಭಟ್ ,ದೀಪಕ್ ಶೆಣೈ ಅಲೆವೂರು ಹಾಗೂ , ಆಡಳಿತ ಮಂಡಳಿಯ ಸದಸ್ಯರು , ಜಿ ಎಸ್ ಬಿ ಯುವಕ ಮಂಡಳಿ , ಭಗಿನಿ ವೃಂದ , ಜಿ ಎಸ್ ಬಿ ಮಹಿಳಾ ಮಂಡಳಿ ಶ್ರೀ ಶಾರದಾ ಮಹೋತ್ಸವ ಸಮಿತಿಯ ಸದಸ್ಯರು ನೂರಾರು ಭಕ್ತರೊ ಉಪಸ್ಥರಿದ್ದರು.

