ವರದಿ : ಮಂದಾರ ರಾಜೇಶ್ ಭಟ್
ಮೂಡುಬಿದಿರೆ : ಬ್ರಾಹ್ಮಣ ಸಮಾಜದ ಪ್ರಬಲ ಶಕ್ತಿ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಕೂಟ ಮಹಾಜಗತ್ತು ಸಾಲಿಗ್ರಾಮ (ರಿ.) ಸಂಸ್ಥೆಯು ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಕೂಟ ಬ್ರಾಹ್ಮಣರ ಐಕ್ಯತೆ ಮತ್ತು ಅಭ್ಯುದಯದ ದ್ಯೋತಕವಾಗಿ, ಮೂಡುಬಿದಿರೆಯಲ್ಲಿ ಸಂಸ್ಥೆಯ 38ನೇ ಅಂಗಸಂಸ್ಥೆಯು ಅತ್ಯಂತ ವೈಭವದಿಂದ ಲೋಕಾರ್ಪಣೆಗೊಳ್ಳಲು ಸಜ್ಜಾಗಿದೆ.
ಕಾರ್ಯಕ್ರಮದ ವಿವರಗಳು
ದಿನಾಂಕ: ಫೆಬ್ರವರಿ 01, 2026 (ರವಿವಾರ)
ಸಮಯ: ಅಪರಾಹ್ನ 3:30 ಗಂಟೆಗೆ
ಸ್ಥಳ: ಶ್ರೀ ಗೋಪಾಲಕೃಷ್ಣ ದೇವಳದ ಪ್ರಾಂಗಣ, ಕಲ್ಸಂಕ ಬಳಿ, ಮೂಡಬಿದಿರೆ.
ಗಣ್ಯರ ಉಪಸ್ಥಿತಿ –
ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕೇಂದ್ರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಚ್. ಸತೀಶ ಹಂದೆ ಅವರು ಆಗಮಿಸಲಿದ್ದು, ಅವರ ಅಮೃತ ಹಸ್ತದಿಂದ ಉದ್ಘಾಟನಾ ಕಾರ್ಯಕ್ರಮವು ಶಾಸ್ತ್ರೋಕ್ತವಾಗಿ ನೆರವೇರಲಿದೆ.
ಕಾರ್ಯಕ್ರಮದಲ್ಲಿ ಕೇಂದ್ರ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಮಾಜದ ಹಿರಿಯ ಗಣ್ಯರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಲಿದ್ದಾರೆ.
ನವಶಕೆಯ ಆರಂಭ–
ಮೂಡಬಿದಿರೆ ಪರಿಸರದ ಕೂಟ ಬಂಧುಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಸ್ಥಾಪನೆಯಾಗುತ್ತಿರುವ ಈ ಅಂಗಸಂಸ್ಥೆಯು, ಸಮಾಜದ ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಲಿದೆ.
“ಸಮಾಜದ ಬಾಂಧವ್ಯ ಗಟ್ಟಿಗೊಳ್ಳಲಿ, ನಮ್ಮ ಪರಂಪರೆ ಮುಂದಿನ ಪೀಳಿಗೆಗೆ ಹರಿಯಲಿ. ಮೂಡುಬಿದಿರೆ ಆಸುಪಾಸಿನ ಎಲ್ಲಾ ಕೂಟ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಸಮಾರಂಭವನ್ನು ಯಶಸ್ವಿಗೊಳಿಸಿಕೊಡಬೇಕಾಗಿ -ಡಾ. ಎನ್. ಸೋಮಶೇಖರ್ ಮಯ್ಯ, ನಿಯೋಜಿತ ಸ್ಥಾಪನಾ ಸಮಿತಿ ಸದಸ್ಯರು ಆಹ್ವಾನ ನೀಡಿರುತ್ತಾರೆ.
ವಿಶೇಷ ಆಹ್ವಾನ–
ಮೂಡಬಿದಿರೆ ಮತ್ತು ಸುತ್ತಮುತ್ತಲಿನ ಸಮಸ್ತ ಕೂಟ ಬಾಂಧವರಿಗೆ ಇದು ಹೆಮ್ಮೆಯ ಕ್ಷಣ. ಈ ಭವ್ಯ ಕಾರ್ಯಕ್ರಮಕ್ಕೆ ತಾವೆಲ್ಲರೂ ಸಪರಿವಾರವಾಗಿ ಆಗಮಿಸಿ, ಸಂಘಟನೆಯ ಶಕ್ತಿಯನ್ನು ವೃದ್ಧಿಸಬೇಕೆಂದು ಮೂಡಬಿದಿರೆ ಅಂಗಸಂಸ್ಥೆ ಸ್ಥಾಪನಾ ಸಮಿತಿಯು ಆದರದ ಆಮಂತ್ರಣವನ್ನು ನೀಡಿದೆ.

