ಬೆಂಗಳೂರು: ನಗರದಲ್ಲಿ ಹಾಡಹಗಲೇ 2 ಕೋಟಿ ರೂ ಹಣ ದರೋಡೆ ಮಾಡಿರುವಂತಹ ಘಟನೆ ಜೂನ್ 25ರಂದು ವಿದ್ಯಾರಣ್ಯಪುರಂನ ಎಂ.ಎಸ್.ಪಾಳ್ಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುಎಸ್ಡಿಟಿಗೆ ಹಣ ಕನ್ವರ್ಟ್ ಮಾಡಿಸಿಕೊಳ್ಳಲು ಬಂದಾಗ ದರೋಡೆ ಮಾಡಲಾಗಿದೆ. ಕೆಂಗೇರಿ ನಿವಾಸಿ ಶ್ರೀಹರ್ಷ 2 ಕೋಟಿ ರೂ. ಹಣ ಕಳೆದುಕೊಂಡವರು. ಸದ್ಯ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದರೋಡೆ ನಡೆಸಿದ ಗ್ಯಾಂಗ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.