ಸೋಮವಾರಪೇಟೆ ಸಂತೆಮಳದಲ್ಲಿ ಅನಾರೋಗ್ಯ ಸರಿಯಿಲ್ಲದೆ ಸಂತೆಮಳದಲ್ಲಿ ಮಲಗಿದ ಅನಾಥನನ್ನು ಟೌನ್ ಪಂಚಾಯತಿ ಸಹಕಾರದೊಂದಿಗೆ ಬೆಂಗಳೂರು ಆಟೋ ರಾಜ ಸಂಸ್ಥೆಯ ಅನಾಥಾಶ್ರಮಕ್ಕೆ ಸೇರಿಸಿದ ಶಿವರಾಮಗೌಡರ ಕರವೇ ಅಧ್ಯಕ್ಷರು ಜನರ ಪ್ರಶಂಸೆಗೆ ಪಾತ್ರರಾಗಿರುತ್ತಾರೆ

0
42

ಸೋಮವಾರಪೇಟೆ ಸಂತೆಮಳದಲ್ಲಿ ಕಳೆದ ಒಂದು ವಾರದಿಂದ ಅನಾರೋಗ್ಯ ಸರಿಯಿಲ್ಲದೆ ಮಲಗಿಕೊಂಡಿದ್ದ ಸೋಮು ವ್ಯಕ್ತಿಯನ್ನು ಸೋಮವಾರಪೇಟೆ ತಾಲೂಕಿನ ವರ್ತಕರಾದ ಸಂತೋಷ ರವರು ಇವರನ್ನು ಗಮನಿಸಿ ಕರವೇ ಫೋನ್ ಮಾಡಿ ಇವರ ಬಗ್ಗೆ ತಿಳಿಸಿರುತ್ತಾರೆ . ಆಗ ನಾವು ಟೌನ್ ಪಂಚಾಯತಿಗೆ ತಾವು ಒಂದು ಮನವಿ ಕೊಡಿ ತಿಳಿಸದ ಮೇರೆಗೆ ಟೌನ್ ಪಂಚಾಯತಿಗೆ ಮನವಿ ಕೊಟ್ಟಿರುತ್ತಾರೆ . ಮನವಿ ಮೇರೆಗೆ ಕರವೇ ಅಧ್ಯಕ್ಷರು ಸಂಪರ್ಕಿಸಿದರು ತದನಂತರ ಕರವೇಯಿಂದ ಪೊಲೀಸ್ ಪರ್ಮಿಷನ್ ಪಡೆದು ಟೌನ್ ಪಂಚಾಯತಿ ಸಹಕಾರದೊಂದಿಗೆ ಸ್ನಾನ ಮಾಡಿಸಿ ಇವರನ್ನು ಬಿಟ್ಟು ಬಂದಿರುತ್ತೇವೆ,ಯಾಕೆಂದರೆ ಒಂದು ಮಾನವೀಯ ದೃಷ್ಟಿಯಿಂದ ಯಾರು ಒಂದು ಸೋರಿಲ್ಲದೆ ಮಲಗಬಾರದೆಂದು ಕರವೇ ಆಶ್ರಯ ಹಾಗಾಗಿ ಪ್ರತಿದಿನವೂ ಇತರ ಕೆಲಸ ಮಾಡಿಕೊಂಡೆ ಬರುತ್ತಿದ್ದೇವೆ ಮುಂದೆ ಇದೇ ತರ ಕೆಲಸ ಮಾಡಿಕೊಂಡು ಬಡವರ ಪರ ಕೆಲಸ ಮಾಡಿಕೊಡಲು ಸಿದ್ಧರಿರುತ್ತೇವೆ , ಈ ಸಮಯದಲ್ಲಿ ನಮಗೆ ಸಹಕರಿಸಿದ ಟೌನ್ ಪಂಚಾಯತಿಯವರಿಗೂ ಹಾಗೂ ಟೌನ್ ಪಂಚಾಯತಿಯಿಂದ ವಾಹನದ ವ್ಯವಸ್ಥೆ ಮಾಡಿಕೊಡಲಾಗಿತ್ತು . ಇದೇ ಸಮಯದಲ್ಲಿ ನಮಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು ಮತ್ತು ಪೌರಕಾರ್ಮಿಕರಿಗೂ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ ಅದೇ ಸಮಯದಲ್ಲಿ ಸ್ಥಾನ ಮಾಡಿಸಲು ನೀರು ಕೊಟ್ಟಂತ ಎಲ್ಲರಿಗೂ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ .
ಶಿವರಾಮೇಗೌಡ ಕರವೇ ಅಧ್ಯಕ್ಷರು ಫ್ರಾನ್ಸಿಸ್ ಡಿಸೋಜ
9686095831

LEAVE A REPLY

Please enter your comment!
Please enter your name here