ಉಡುಪಿ: ಹಿರಿಯ ಸಾಹಿತಿ ದಿ.ಎಸ್​.ಎಲ್​.ಬೈರಪ್ಪ ಅವರಿಗೆ ನುಡಿನಮನ ಕಾರ್ಯಕ್ರಮ

0
4

ಉಡುಪಿ: ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಅಮೋಘ ಉಡುಪಿ ವತಿಯಿಂದ ಹಿರಿಯ ಸಾಹಿತಿ ದಿ.ಎಸ್​.ಎಲ್​.ಬೈರಪ್ಪ ಅವರಿಗೆ ನುಡಿನಮನ ಕಾರ್ಯಕ್ರಮ ಶನಿವಾರ ನಡೆಯಿತು.
ಹಿರಿಯ ಸಾಹಿತಿ ಶ್ರೀನಿವಾಸ ದೇಶಪಾಂಡೆ ಮಾತನಾಡಿ, ಬೈರಪ್ಪ ಬಾಲ್ಯದ ಕಡುಬಡತನವನ್ನು ಮೀರಿ ಸಾಹಿತ್ಯವನ್ನು ಕಟ್ಟಿ ದಂತಕತೆಯಾಗಿ ಮೆರೆದವರು. ಬೈರಪ್ಪ ಅವರನ್ನು ದೂರ ಮಾಡಿ ಕನ್ನಡ ಸಾಹಿತ್ಯ ಇಲ್ಲವೇ ಇಲ್ಲ ಎಂಬ ಸ್ಥಿತಿ ಇದೆ. ಆ ಮಟ್ಟದಲ್ಲಿ ಅವರು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಎ.ಎಸ್​.ಎನ್​.ಹೆಬ್ಬಾರ್​, ಉಡುಪಿ ಜಿಲ್ಲಾ ಲೇಖಕಿಯರ ಸಂದ ಅಧ್ಯಕ್ಷೆ ಡಾ.ನಿಕೇತನ ನುಡಿನಮನ ಸಲ್ಲಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರುರಾಜ್​ ಗಂಟಿಹೊಳೆ, ಅಮೋಘ ಸಂಚಾಲಕ ಕುಯಿಲಾಡಿ ಸುರೇಶ್​ ನಾಯಕ್​, ಪ್ರಧಾನ ಕಾರ್ಯದರ್ಶಿ ಅನಿಲ್​ ಶೆಟ್ಟಿ ಮಾಬೆಟ್ಟು ಉಪಸ್ಥಿತರಿದ್ದರು. ಅಮೋ ಸಂಟನೆಯ ಪೂರ್ಣಿಮಾ ಸುರೇಶ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾಕರ ಬಂಡಿ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here