ಹೊಯ್ಗಿ ಚಾರಿಟೆಬಲ್ ಟ್ರಸ್ಟ್ (ರಿ.), ಜಯಂಟ್ಸ್ ಗ್ರೂಪ್ ಉಡುಪಿ, ಹಳೇ ವಿದ್ಯಾರ್ಥಿ ಸಂಘ, ನಾರ್ತ್ ಶಾಲೆ ಉಡುಪಿ, ಇವರು ರಕ್ತ ನಿಧಿ ಕೇಂದ್ರ, ಉಡುಪಿ ಸರಕಾರಿ ಜಿಲ್ಲಾಸ್ಪತ್ರೆ ಇವರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಆದಿತ್ಯವಾರ ನೆಡೆಯಿತು .

ಹೊಯ್ಗಿ ಟ್ರಸ್ಟ್ ನ ಗಂಗಾಧರ ನಾಯಕ್, ಇವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚೈತನ್ಯ ಸೋಶಿಯಲ್ ಫೌಂಡೇಷನ್ ಟ್ರಸ್ಟ್ ನ ಸಂಸ್ಥಾಪಕರಾದ ಸುನಿಲ್ ಸಾಲಿಯಾನ್, ಜಯಂಟ್ಸ್ ಉಡುಪಿಯ ದಿವಾಕರ್ ಸಾಲಿಯಾನ್, ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ರಾವ್, ತೆಂಕಪೇಟೆ ವಾರ್ಡಿನ ನಗರಸಭಾ ಸದಸ್ಯರಾದ ಮಾನಸ ಪೈ, ಶಾಲಾ ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಸಾವಿತ್ರಿ , ನ್ಯಾಷನಲ್ ಸೊಸೈಟಿಯ ಸಿಇಒ ಚಿದಾನಂದ ಪೈ , ವಿವಿಧ ಸಂಸ್ಥೆಯ ಪಧಾದಿಕಾರಿಗಳು ಉಪಸ್ಥಿತರಿದ್ದರು.
ಸರ್ಕಾರಿ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ಮೆಡಿಕಲ್ ಆಫೀಸರ್ ಡಾ. ವೀಣಾಕುಮಾರಿ ರಕ್ತದಾನದ ಕುರಿತು ಮಾಹಿತಿ ನೀಡಿದರು. ಶ್ರೀನಾಥ್ ಹಿರಿಯಡ್ಕ ಧನ್ಯವಾದಗೈದರು.

![DSC09620[1]](https://tulunaduvarthe.com/wp-content/uploads/2025/10/DSC096201-696x262.webp)