ಉಡುಪಿ ಕಿದಿಯೂರು ಹೋಟೆಲಿನ ಅನಂತಶಯನ ಸಭಾಂಗಣದಲ್ಲಿ ಉಡುಪಿ ಸಿವಿಲ್ ಇಂಜಿನಿಯರ್ಸ್ ಎಸೋಸಿಯೇಶನ್ ಇಂಜಿನಿಯರ್ಸ್ ಸಮ್ಮಿಲನಕಾರ್ಯಕ್ರಮ ಡಿ 01 ರಂದು ಜರಗಿತು , ಇದರ ಉದ್ಘಾಟನೆಯನ್ನು ದೀಪ ಬೆಳಗಿಸಿ ಸರ್ಫಾ ಕೋಟ್ಸ್ ನ ರಿಜಿನಲ್ ಮ್ಯಾನೇಜರ್ ಶ್ರೀರಾಮಚರಣ ರೈ ಚಾಲನೆ ನೀಡಿ ಶುಭ ಹಾರೈಸಿದರು . ಅಧ್ಯಕ್ಷತೆಯನ್ನು ಕೆ.ರಂಜನ್ ವಹಿಸಿದರು , ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಇಂಜಿನಿಯರ್ ಭರತ್ ಭೂಷಣ್ ಹಾಗೂ ಇಂಜಿನಿಯರ್ ಗಣೇಶ್ ಬೈಲೂರು, ಖಜಾಂಜಿ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಉಪಸ್ಥಿತರಿದ್ದರು. ಪೈಂಟ್ ನ ಬಗ್ಗೆ ಆಧುನಿಕ ತಂತ್ರ ಜ್ಞಾನದ ಉತ್ತಮಮಾಹಿತಿಯನ್ನು ರಾಮಚರಣ್ ರೈ ನೀಡಿದರು ಪ್ರಜ್ವಲ್ , ರಾಘವೇಂದ್ರ ಸಹಕರಿಸಿದರು ಧನ್ಯವಾದವನ್ನು ಕಾರ್ಯದರ್ಶಿ ಇಂಜಿನಿಯರ್ ಕೆ.ಹರೀಶ್ ನೀಡಿದರು , ನಿರೊಪಣೆ ಕುಮಾರಿ ಸ್ವಾತಿ ಆಚಾರ್ಯ ಮಾಡಿದರು ಉಡುಪಿ ಪರಿಸರದ ನೂರಾರು ಇಂಜಿನಿಯರ್ಸ್ ಭಾಗವಹಿಸಿದ್ದರು

