ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ: 125 ವರ್ಷದ ಭಜನಾ ಸಪ್ತಾಹಕ್ಕೆ ಚಾಲನೆ

0
45

ಉಡುಪಿ:  ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ, ಭಜನಾ ಆರಾಧ್ಯ ದೇವರಾದ  ವಿಠೋಬಾ ರುಖುಮಾಯಿ  ಶ್ರೀ ದೇವರ ಸನ್ನಿಧಿಯಲ್ಲಿ  ಈ ಬಾರಿಯ  125 ವರ್ಷದ ಭಜನಾ ಸಪ್ತಾಹ ದೇವಳದ ಪ್ರಧಾನ ಅರ್ಚಕರಾದ ವಿನಾಯಕ ಭಟ್  ದೀಪ ಬೆಳಗಿಸಿ , ಮಹಾ ಮಂಗಳಾರತಿ  ಬೆಳಗಿಸಿ ಚಾಲನೆ ನೀಡಿದರು. ಜು 30 ರಿಂದ  7 ದಿನಗಳ ಕಾಲ ಊರ  ಪರಊರ ಭಜನಾ ತಂಡಗಳಿಂದ   ಅಹೋರಾತ್ರಿ ನಿರಂತರ ಭಜನಾ ಕಾರ್ಯಕ್ರಮ  ವೈಭವದಿಂದ ನೆಡೆಯಲಿದೆ.                                                                                                                                                                                                                                ಧಾರ್ಮಿಕ ಪೂಜಾ ವಿಧಾನಗಳನ್ನು ಹಾಗೂ  ಸಮೂಹಿಕ ಪ್ರಾರ್ಥನೆ  ,  ಮಹಾ ಪೂಜೆ   ವಿನಾಯಕ್ ಭಟ್  ನೆರವೇರಿಸಿದರು. ಅರ್ಚಕರಾದ  ದಯಾಘಾನ್ ಭಟ್  , ದೀಪಕ್  ಭಟ್  , ಗಿರೀಶ್ ಭಟ್  ಸಹಕರಿಸಿದರು ,  ಶ್ರೀ ದೇವರಿಗೆ   ವಿಶೇಷ  ಅಲಂಕಾರ ,   ನೂರಾರು ಭಕ್ತರೂ ಭಕ್ತಿಯಿಂದ  ಜೈ ವಿಠಲ್  ಹರಿ ವಿಠಲ್  ನಾಮ ಸ್ಮರಣೆ  ಹಾಡುತ್ತ  ಭಜನಾ ಸೇವೆ  ಯಲ್ಲಿ ಪಾಲ್ಗೊಂಡರು.                                                                    ಆಡಳಿತ ಮಂಡಳಿಯ   ಪಿ ವಿ  ಶೆಣೈ , ವಿಶ್ವನಾಥ್ ಭಟ್  , ವಸಂತ್ ಕಿಣೆ, ಶಾಂತಾರಾಮ್ ಪೈ , ಗಣೇಶ್ ಕಿಣಿ , ಉಮೇಶ್ ಪೈ  , ಕೈಲಾಸನಾಥ ಶೆಣೈ  , ನಾರಾಯಣ ಪ್ರಭು ,  ಭಜನಾ ಮೊಹೋತ್ಸವದ ಅಧ್ಯಕ್ಷ  ಮಟ್ಟಾರ್ ಸತೀಶ್ ಕಿಣಿ  , ಪ್ರಕಾಶ್ ಭಕ್ತ  , ಭಾಸ್ಕರ ಶೆಣೈ  ಹಾಗೂ  ಆಡಳಿತ ಮಂಡಳಿಯ ಸದಸ್ಯರು  , ಜಿ ಎಸ್  ಬಿ  ಯುವಕ ಮಂಡಳಿ ಸದಸ್ಯರು   , ಭಗಿನಿ ವೃಂದ ಸದಸ್ಯರು  , ಜಿ ಎಸ್ ಬಿ ಮಹಿಳಾ ಮಂಡಳಿ ಸದಸ್ಯರು  ,   ಭಜನಾ ಮಹೋತ್ಸವ ಸಮಿತಿಯ ಸದಸ್ಯರು ,  ಊರ  ಪರಊರ  ನೂರಾರು ಭಜನಾ ಮಂಡಳಿಯ ಸದಸ್ಯರು  , ಸಾವಿರಾರು ಸಮಾಜ ಬಾಂದವರು ಉಪಸ್ಥರಿದ್ದರು .

LEAVE A REPLY

Please enter your comment!
Please enter your name here