ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ , ಸೋಮವಾರ ಮುಂಜಾನೆ ಸಾವಿರಾರು ಹಣತೆ ದೀಪಗಳಿಂದ ವಿಶ್ವ ರೂಪ ದರ್ಶನ. ನೆಡೆಯಿತು . ಪಶ್ಚಿಮ ಜಾಗರ ಪೂಜೆಯಲ್ಲಿ ಸಾವಿರಾರು ಭಕ್ತರೂ ಪಾಲ್ಗೊಂಡು ಸರತಿ ಸಾಲಿನಲ್ಲಿ ಶ್ರೀ ದೇವರ ದರ್ಶನ ಪಡೆದರು.

ವಿವಿಧ ದೇವರಗಳ ರಂಗೋಲಿಯಲ್ಲಿ ಮೂಡಿ ಬಂದ ಬಣ್ಣದ ಚಿತ್ತಾರದಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ದಿ ಚಿತ್ರಣ , ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಪರಂಪರೆಯ 550ನೇ ವರ್ಷದ ಆಚರಣೆ , ಶ್ರೀ ದುರ್ಗಾ ಪರಮೇಶ್ವರಿ , ಶ್ರೀ ವೇದವ್ಯಾಸ ದೇವರು , ಶ್ರೀ ವೆಂಕಟರಮಣ , ಶ್ರೀ ಮಹಾಗಣಪತಿ , ಶ್ರೀ ವರಾಹ ರೊಪಂ , ಶ್ರೀರಾಮ ,ಶ್ರೀ ಶಿವಾ , ಜೈ ವಿಠಲ್ ಹರಿ ವಿಠಲ್ ,ಶ್ರೀ ವಿಠೋಬಾ ರುಖುಮಾಯಿ ದೇವರು ಶ್ರೀನಿವಾಸ ದೇವರ ಮುಂತಾದ ದೇವರ ಚಿತ್ತಾರ ಭಕ್ತರ ಮನ ಸೆಳೆಯಿತು , ಪ್ರಧಾನ ಅರ್ಚಕರಾದ ವಿನಾಯಕ ಭಟ್ ಮಹಾ ಪೂಜೆ ನೆರವೇರಿಸಿದರು , ಆಡಳಿತ ಮಂಡಳಿಯ ಸದಸ್ಯರು , ಜಿ ಎಸ್ ಬಿ ಯುವಕ ,ಹಾಗೂ ಮಹಿಳಾ ಮಂ ಡಳಿಯ ಸದಸ್ಯರು ಸಹಕರಿಸಿದರು ,ಭಜನಾ ಮೊಹೋತ್ಸವ ಸಮಿತಿಯ ಸದಸ್ಯರು , ಶ್ರೀ ರಾಮನಾಮ ಜಪ ಅಭಿಯಾನ ಸಮಿತಿಯ ಸದಸ್ಯರು , ನೂರಾರು ಸಮಾಜಭಾಂದವರು ಉಪಸ್ಥರಿದ್ದರು

ಶ್ರೀ ದೇವರ ಸನ್ನಿಧಿಯಲ್ಲಿ ಸುಪ್ರಭಾತ , ಕಾಕಡ ಆರತಿ , ಭಜನಾ ಕಾರ್ಯಕ್ರಮ , ವಿಶೇಷ ಹೂವಿನ ಅಲಂಕಾರ , ದೀಪಾರಾಧನೆ , ಮಂಗಳಾರತಿ , ಪ್ರಸಾದ ವಿತರಣೆ ನೆಡೆಯಿತು

