ಮಾರ್ಚ್ 04ರ ಬೆಳಿಗ್ಗೆ 7:19ಕ್ಕೆ ಶ್ರೀ ಕ್ಷೇತ್ರ ಶಂಕರಪುರದ ಗುರೂಜಿಯವರು ಪೂಜೆಗೆ ಬರುವಾಗ ಕ್ಷೇತ್ರದ ಮುಂಭಾಗದಲ್ಲಿ 19 ಅಡಿ ಎತ್ತರದ ಶ್ರೀ ಮುಖ್ಯಪ್ರಾಣ ಮೂರ್ತಿ ಸ್ಥಾಪನೆಯ ಪೀಠದ ಮೇಲೆ ಒಂದು ವಾನರ ಗುರೂಜಿಯವರ ಬರುವಿಕೆಯನ್ನು ಕಾದು ಕುಳಿತಿತ್ತು. ಗುರೂಜಿಯವರನ್ನು ಕಂಡ ತಕ್ಷಣ ತನ್ನ ಕೈಯಲ್ಲಿ ಇದ್ದ ಎಲ್ಲಿಂದಲೋ ತಂದ ಬಿಸ್ಕಿಟ್ನ್ನು ಪೀಠದ ಒಳಗೆ ಹಾಕಿ ಅಲ್ಲಿಂದ ಹೊರಟು ಹೋಯಿತು. ಈ ಘಟನೆ ನಡೆದಿದೆ.
ಈ ಸೇವೆಯನ್ನು ದೇವರು ಮೆಚ್ಚಿದ್ದಾರೆ ಹಾಗೂ ಈವರೆಗೆ ಕ್ಷೇತ್ರದ ವತಿಯಿಂದ ನಡೆಯುತ್ತಿದ್ದ ಪ್ರಾಣಿ ಪಕ್ಷಿಗಳ ಮೋಕ್ಷ ಸೇವೆಗೆ ದೇವರ ಅನುಗ್ರಹವಾಗಿದೆ. 2026 ಏಪ್ರಿಲ್ 1 ರಿಂದ 3 ರವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದರು.
