ರಣರಂಗವಾದ ವಾರಾಣಸಿ ನ್ಯಾಯಾಲಯ..!; ವಕೀಲರಿಂದ ಪೊಲೀಸರ ಮೇಲೆ ಹಲ್ಲೆ

0
127

ವಾರಾಣಸಿ: ವಾರಾಣಸಿ ನ್ಯಾಯಾಲಯವು ಇಂದು ಅಕ್ಷರಶಃ ರಣರಂಗವಾಗಿತ್ತು. ನೂರಾರು ವಕೀಲರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಬರಗಾಂವ್ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿದ್ದ ಸಬ್-ಇನ್ಸ್‌ಪೆಕ್ಟರ್ ಮಿಥಿಲೇಶ್ ಪ್ರಜಾಪತಿ (37) ಅವರನ್ನು ವಕೀಲರು ಸುತ್ತುವರೆದಿದ್ದು, ಜಿಲ್ಲಾ ಮ್ಯಾಜಿಸ್ಟ್ರೇಟ್ ಪೋರ್ಟಿಕೋ ಬಳಿ ಅವರ ಮೇಲೆ ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಕೀಲರ ಗುಂಪು ಪ್ರಜಾಪತಿಯವರನ್ನು ಬೆನ್ನಟ್ಟಿ, ಒದ್ದು, ಗುದ್ದಾಡುತ್ತಿರುವುದು ನ್ಯಾಯಾಲಯದ ಸಿಸಿಟಿವಿಯಲ್ಲಿ ಸೆರೆಯಾಗಿದೆ . ವಕೀಲರು ಅವರನ್ನು ಕಚೇರಿಗೆ ಎಳೆದೊಯ್ದು ಅಲ್ಲಿಯೂ ಹಲ್ಲೆ ಮುಂದುವರೆಸಿದರು. ನ್ಯಾಯಾಲಯದ ಇತರ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಅವರನ್ನು ರಕ್ಷಿಸುವವರೆಗೂ ಪರಿಸ್ಥಿತಿ ಹಿಡಿತದಲ್ಲಿರಲಿಲ್ಲ. ಯಾವುದೋ ಭೂ ವಿವಾದ ವಿಚಾರವಾಗಿ ಮನಸ್ತಾಪವಿತ್ತು ಎನ್ನಲಾಗಿದೆ. ತನಿಖೆ ಮುಂದುವರಿದಿದೆ.

LEAVE A REPLY

Please enter your comment!
Please enter your name here