ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 132ನೇ ವರ್ಷಾಚರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮ
- ವಿದ್ಯಾರ್ಥಿಗಳಿಗೆ,ಉಪನ್ಯಾಸಕರಿಗೆ ಹಾಗೂ ಆಸಕ್ತರಿಗಾಗಿಮೂರುವಿಶೇಷ ಅವಧಿಗಳು
- ಚಿಂತಕರು ಹಾಗೂ ಖ್ಯಾತ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ಅವರಿಂದ ಉಪನ್ಯಾಸ
ಭಾರತವು ಪಾಶ್ಚಾತ್ಯರ ಆಳ್ವಿಕೆಯಲ್ಲಿದ್ದ ಕಾಲಘಟ್ಟದಲ್ಲಿ ಅಮೇರಿಕಾದ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ಹಿರಿಮೆಯನ್ನು ವಿಶ್ವಕ್ಕೆ ಸಾರಿದವರು ರಾಷ್ಟ್ರಭಕ್ತ ಸಂತ ಸ್ವಾಮಿ ವಿವೇಕಾನಂದರು. 1893 ನೇ ಇಸವಿಯ ಸೆಪ್ಟೆಂಬರ್11 ರಂದು ಸ್ವಾಮಿ ವಿವೇಕಾನಂದರು ಮಾಡಿದ ಐತಿಹಾಸಿಕ ಭಾಷಣದ 132ನೇ ವರ್ಷಾಚರಣೆಯ ಸುಸಂದರ್ಭದಲ್ಲಿ ಪುತ್ತೂರಿನ ವಿವೇಕಾನಂದ ಪದವಿಪೂರ್ವ ವಿದ್ಯಾಲಯವು “ವಿವೇಕ ವಿಜಯ” ಎಂಬ ಶೀರ್ಷಿಕೆಯೊಂದಿಗೆ ವಿಶೇಷ ಉಪನ್ಯಾಸಗಳನ್ನು ಮೂರು ಅವಧಿಗಳಲ್ಲಿ ದಿನಾಂಕ 11 ಅಕ್ಟೋಬರ್ 2025ಶನಿವಾರದಂದು ಪುತ್ತೂರಿನ ನೆಹರು ನಗರದಲ್ಲಿರುವ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದೆ.
ಉದ್ಘಾಟನೆ ಹಾಗೂ ಮೊದಲ ಅವಧಿ:ಬೆಳಗ್ಗೆ 9.30ಕ್ಕೆ ಸರಿಯಾಗಿ ವಿವೇಕಾನಂದ ಆವರಣದ ಕೇಶವ ಸಂಕಲ್ಪ ಸಭಾಭವನದಲ್ಲಿ ವಿವೇಕ ವಿಜಯ ವಿಶೇಷ ಉಪನ್ಯಾಸಗಳ ಉದ್ಘಾಟನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೆ. ಎಂ. ಕೃಷ್ಣ ಭಟ್ಅವರು ನೆರವೇರಿಸಲಿದ್ದಾರೆ. ಉದ್ಘಾಟನೆಯ ನಂತರ ನಡೆಯುವ ಮೊದಲ ಅವಧಿಯಲ್ಲಿ ಚಿಂತಕರು ಹಾಗೂ ಖ್ಯಾತ ವಾಗ್ಮಿಗಳಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ವಿದ್ಯಾರ್ಥಿಗಳನ್ನುದ್ದೇಶಿಸಿ ಭಾರತ ವಂದನಾ – ವಿವೇಕ ಚಿಂತನಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ²æÃರವೀಂದ್ರ ಪಿ. ಅವರು ಉಪಸ್ಥಿತರಿರಲಿದ್ದಾರೆ. ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಭಾಗವಹಿಸಲಿದ್ದಾರೆ.
ಎರಡನೇ ಅವಧಿ: ಎರಡನೇ ಅವಧಿಯು ಬೆಳಗ್ಗೆ 11.30ಕ್ಕೆ ಸರಿಯಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಶಿಕ್ಷಕರಿಗಾಗಿ ನಡೆಯಲಿದ್ದು ²æÃಚಕ್ರವರ್ತಿ ಸೂಲಿಬೆಲೆಯವರು ಶಿಕ್ಷಕರನ್ನುದ್ದೇಶಿಸಿ ರಾಷ್ಟ್ರ gÀPÀëuÁ– ವಿವೇಕ ಶಿಕ್ಷಣಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ವಿವಿಧ ಶಾಲಾ ಕಾಲೇಜುಗಳ ಸುಮಾರು 250 ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿವಿಶೇಷಅಭ್ಯಾಗತರಾಗಿಬೆಟ್ಟಂಪಾಡಿಸರಕಾರಿಪ್ರಥಮದರ್ಜೆಕಾಲೇಜಿನನಿವೃತ್ತಪ್ರಾಂಶುಪಾಲರಾದಡಾ. ವರದರಾಜಚಂದ್ರಗಿರಿಭಾಗವಹಿಸಲಿದ್ದಾರೆ. ವಿವೇಕಾನಂದಪದವಿಪೂರ್ವಕಾಲೇಜಿನಆಡಳಿತ ಮಂಡಳಿಯಸಂಚಾಲಕರಾದಶ್ರೀಎಂ. ಗೋಪಾಲಕೃಷ್ಣಭಟ್ ಕಾರ್ಯಕ್ರಮದಲ್ಲಿಉಪಸ್ಥಿತರಿರಲಿದ್ದಾರೆ.
ಮೂರನೇಅವಧಿ:ಮೂರನೇಅವಧಿಯಲ್ಲಿ “ಸಿಂದೂರ – ಭಾರತದವಿಶ್ವರೂಪದರ್ಶನ” ಎಂಬವಿಷಯದಕುರಿತುಪುತ್ತೂರುಸಿಟಿಝನ್ ಫೋರಮ್ ನೇತೃತ್ವದಲ್ಲಿಆಸಕ್ತರಿಗಾಗಿವಿಶೇಷಅವಧಿಹಾಗೂಸಂವಾದವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿಸಂಜೆ 4.30ಗಂಟೆಗೆಸರಿಯಾಗಿನಡೆಯಲಿದ್ದು, ಈಕಾರ್ಯಕ್ರಮದಲ್ಲಿಚಕ್ರವರ್ತಿಸೂಲಿಬೆಲೆಯವರುವಿಷಯಮಂಡನೆನಡೆಸಿಸಂವಾದದಲ್ಲಿಭಾಗವಹಿಸಲಿದ್ದಾರೆ. ಪುತ್ತೂರಿನಮಹಾವೀರಆಸ್ಪತ್ರೆಯಆರ್ಥೋಪೆಡಿಕ್ ಸರ್ಜನ್ಡಾ. ಸಚಿನ್ ಶಂಕರ್ ಹಾರಕೆರೆಕಾರ್ಯಕ್ರಮದಲ್ಲಿಉಪಸ್ಥಿತರಿರಲಿದ್ದಾರೆ. ದೇಶದಭದ್ರತೆ, ಸಾರ್ವಭೌಮತೆಮತ್ತುಅಖಂಡತೆಗೆದೇಶದಸಶಸ್ತ್ರಪಡೆಗಳಕೊಡುಗೆಯನ್ನುಸ್ಮರಿಸುತ್ತಾ, ಭಾರತದಜಾಗತಿಕಶಕ್ತಿಯಪ್ರದರ್ಶನದವಿಷಯಗಳನ್ನುಕೇಂದ್ರೀಕರಿಸಿ ಈ ಅವಧಿನಡೆಯಲಿದೆ. ಹೆಚ್ಚಿನಮಾಹಿತಿಗಾಗಿ 81050 72386, 89719 24424 ಸಂಪರ್ಕಸಂಖ್ಯೆಗಳನ್ನುಸಂಪರ್ಕಿಸಬಹುದು. ಪ್ರಾಂಶುಪಾಲರು