ವೋಟ್​ ಚೋರ್​- ಗಡ್ಡಿ ಚೋರ್​ ಸಹಿ ಅಭಿಯಾನ

0
183

ಉಡುಪಿ: ಮತಗಳ್ಳತನ ನಡೆಸಿ ಬಿಜೆಪಿ ದೇಶದ ಜನತೆಯನ್ನು ವಂಚಿಸುತ್ತಿದೆ. ವೋಟ್​ ಚೋರ್​ ಮೂಲಕ ಅಧಿಕಾರದ ಗದ್ದುಗೆ ಹಿಡಿದಿದೆ. ಹೀಗಾಗಿ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದು ಕಾಂಗ್ರೆಸ್​ ಮುಖಂಡ ಪ್ರಸಾದ್​ರಾಜ್​ ಕಾಂಚನ್​ ಹೇಳಿದರು.
ಕಾಂಗ್ರೆಸ್​ ನೇತೃತ್ವದಲ್ಲಿ ಹಳೆ ಕೆಎಸ್​ಆರ್​ಟಿಸಿ ಬಸ್​ನಿಲ್ದಾಣದ ಮುಂಭಾಗ ಸೋಮವಾರ ಹಮ್ಮಿಕೊಂಡಿದ್ದ ವೋಟ್​ ಚೋರ್​- ಗಡ್ಡಿ ಚೋರ್​ ಸಹಿ ಅಭಿಯಾನದಲ್ಲಿ ಮಾತನಾಡಿದರು.
ಕೆಪಿಸಿಸಿ ಮುಖಂಡೆ ವೆರೆನಿಕಾ ಕರ್ನೇಲಿಯೋ ಮಾತನಾಡಿದರು. ಉಡುಪಿ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ರಮೇಶ್​ ಕಾಂಚನ್​, ಬ್ರಹ್ಮಾವರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ, ಫಾ. ವಿಲಿಯಂ ಮಾರ್ಟಿಸ್​, ಸತೀಶ್​ ಕೊಡವೂರು, ಸತೀಶ್​ ಕುಮಾರ್​ ಮಂಚಿ, ಡಾ. ಸುನೀತಾ ಶೆಟ್ಟಿ, ಬಿ. ಕುಶಲ ಶೆಟ್ಟಿ, ಕೃಫ್ಣಿ ಶೆಟ್ಟಿ ಬಜಗೋಳಿ, ಪ್ರಖ್ಯಾತ್​ ಶೆಟ್ಟಿ, ಸೌರಬ್​ ಬಲ್ಲಾಳ್​ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here