ದಾವಣಗೆರೆಯ ಆಧ್ಯಾತ್ಮ ಪರಂಪರೆಯ ಕ್ರಿಯಾತ್ಮಕ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಆಶ್ರಯದಲ್ಲಿ ಪ್ರತೀ ತಿಂಗಳು ಹುಣ್ಣಿಮೆಯಂದು ನಿರಂತರ ೨೫ ವರ್ಷಗಳಿಂದ ನಡೆದು ಬಂದ ಶ್ರೀ ಗಾಯತ್ರಿ ಪೂಜೆ ಉಪಾಸನೆ ಈ ತಿಂಗಳ ಗೌರಿ ಹುಣ್ಣಿಮೆ ಪ್ರಯುಕ್ತ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದ ಸಭಾಂಗಣದಲ್ಲಿ ನಡೆದ ಈ ಧಾರ್ಮಿಕ ಸೇವೆ ಪೂಜೆ ಸುಸಂಪನ್ನ ಗೊಂಡಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ಶೆಣೈ ತಿಳಿಸಿದ್ದಾರೆ.
ಈ ತಿಂಗಳ ಪೂಜಾ ಸೇವೆಯ ಉತ್ತಮ್ಚಂದ್ ಗಾಂಧಿ ಮತ್ತು ಕುಟುಂಬ ಸೇರಿದಂತೆ ಪರಿವಾರದ ಗೌರವ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ಪರಿವಾರದ ಸಂಚಾಲಕರಾದ ಆರ್.ಎಂ. ಸತೀಶ್, ಸಮಿತಿ ಸದಸ್ಯರಾದ ಕೆ.ಸಿ. ಉಮೇಶ್, ಪ್ರೇಮಾ ಮಹೇಶ್ವರಯ್ಯ, ಶಿವಲೀಲಾ ಮಹಾದೇವಪ್ಪ, ಲತಾ ಮಂಜುನಾಥ್, ಸತ್ಯನಾರಾಯಣ ಮೂರ್ತಿ, ವಿ. ಕೃಷ್ಣಮೂರ್ತಿ, ಮುಂತಾದವರು ಉಪಸ್ಥಿತರಿದ್ದರು.

