ಕಾಸರಗೋಡು :ಕಾಸರಗೋಡು ಜಿಲ್ಲೆಯ ಹಿರಿಯ ಪತ್ರಕರ್ತ, ಲೇಖಕ, ಚಿತ್ರಕಲಾವಿದ, ಸಂಘಟಕ ಪ್ರದೀಪ್ ಬೇಕಲ್ ಇವರೀಗೆ 2025 ರ “ಬೇಕಲ ರಾಮಮಂನಾಯಕ ಸಾಹಿತ್ಯ ಪ್ರಶಸ್ತಿ 2025.”ನೀಡಿ ಗೌರವಿಸಲಾಯಿತು.. ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ನೀಡುವ ಈ ಪ್ರಶಸ್ತಿ ಯನ್ನು ಕನ್ನಡ ಭವನ ಸಭಾ ಭವನದಲ್ಲಿ ನಡೆದ ಬೇಕಲ ರಾಮನಾಯಕ ಸಂಸ್ಮರಣೆ, ಕವಿಗೋಷ್ಠಿ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಕಾರ್ಯಕ್ರಮ ದಲ್ಲಿ ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ನೀಡಿದರು. ಶಾಲು ಹೊದಿಸಿ, ಹಾರಾರ್ಪಣೆ ಮಾಡಿ ಸ್ಮರಣಿಕೆ, ಪ್ರಶಸ್ತಿ ಪತ್ರ ಪುಸ್ತಕ ನೀಡಲಾಯಿತು. ಕಾರ್ಯಕ್ರಮ ದಲ್ಲಿ ಪ್ರಮುಖರಾದ ಡಾ. ರವೀಂದ್ರ ಜೆಪ್ಪು. ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಸಂಘ ಅಧ್ಯಕ್ಷರಾದ ಕಮಲಾಕ್ಷ ಕಲ್ಲುಗದ್ದೆ ಸಾಹಿತಿಗಳಾದ ಡಾ. ಕೊಲಚಪ್ಪೆ ಗೋವಿಂದ ಭಟ್, ಕೊಡಗು ಕನ್ನಡ ಭವನ ಅಧ್ಯಕ್ಷರಾದ ಬೋಳಿಜರ ಬಿ. ಅಯ್ಯಪ್ಪ, ಕೊಡಗು ಕನ್ನಡ ಚು. ಸಾ. ಪರಿಷತ್ತು ಅಧ್ಯಕ್ಷೆ ರುಬೀನ ಎಂ. ಎ., ಡಾ. ಕೆ ಏನ್ ವೆಂಕಟ್ರಮಣ ಹೊಳ್ಳ, ಕಾಸರಗೋಡು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿರಾಜ್ ಅಡೂರ್, ಮುಂತಾದವರಿದ್ದರು ಕಮಲಾಕ್ಷ ಕಲ್ಲುಗದ್ದೆ ಅಧ್ಯಕ್ಷತೆ ವಹಿಸಿದ್ದರು ಕ. ಸಾ. ಪ. ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಭವನ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೋಟೆಕಣಿ ಸ್ವಾಗತಿಸಿ ಉಪಾಧ್ಯಕ್ಷ ಪ್ರಕಾಶ್ ಚಂದ್ರ ವಂದಿಸಿದರು.
ಲೇಖಕ ಪ್ರದೀಪ್ ಬೇಕಲ್ ರೀಗೆ “ಬೇಕಲ ರಾಮನಾಯಕ ಸಾಹಿತ್ಯ ಪ್ರಶಸ್ತಿ 2025.”
RELATED ARTICLES