ಅಂಗಳ – 2026 ಬೋಧಾಯನ ಶರ್ಮ ಬಳ್ಳಾರಿ ಸನ್ಮಾನ

0
25

ವಿದ್ಯಾಭಾರತಿ ಜೊತೆಗೆ ಶೈಕ್ಷಣಿಕ ಸಂಯೋಜನೆಗೊಂಡ ಶಾಲೆಗಳ ವಿದ್ಯಾರ್ಥಿಗಳಿಗೆ ಹಲವಾರು ಪ್ರಯೋಜನಗಳಿವೆ.ವಿಜ್ಞಾನ ಮೇಳ ಕ್ರೀಡಾಕೂಟ ಪ್ರತಿಭಾನ್ವಿತರಿಗೆ ಸನ್ಮಾನ ಶೈಕ್ಷಣಿಕ ಸ್ಪರ್ಧೆಗಳು ಚಟುವಟಿಕೆಗಳು ಲಭಿಸುತ್ತದೆ.ಆದ್ದರಿಂದ ಹೆಚ್ಚು ಹೆಚ್ಚು ಶಾಲೆಗಳು ವಿದ್ಯಾ ಭಾರತಿಗೆ ಶೈಕ್ಷಣಿಕವಾಗಿ ಸಂಯೋಜನೆ ಮಾಡುವಲ್ಲಿ ಗಮನ ಹರಿಸುವುದು ಎಂದು ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಅಧ್ಯಕ್ಷರು ಪಾಂಡುರಂಗ ಪೈ ಸಿದ್ಧಾಪುರ ಮಾತನಾಡಿದರು.

ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದು ಪ್ರಥಮ ಸ್ಥಾನಿಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಅಂಗಳ – 2026 ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು .

ಶ್ರೀಮತ್ ಜಗದ್ಗುರು ಆನೆಗುಂದಿ ಮಠ ಮಹಾಸಂಸ್ಥಾನ್ ಸರಸ್ವತಿ ಪೀಠ ಪಡುಕುತ್ಯಾರು ಇಲ್ಲಿ ಅಂಗಳ- 2026 ಸನ್ಮಾನ ಸಮಾರಂಭ ನಡೆಯಿತು.

ವೇದಿಕೆಯಲ್ಲಿ ಆನೆಗುಂದಿ ಮಠದ ದಿವಾನರು ಶ್ರೀ ಲೋಲಾಕ್ಷ ಶರ್ಮ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಕುತ್ಯಾರು ಟ್ರಸ್ಟಿನ ಕಾರ್ಯದರ್ಶಿ ಗುರುರಾಜ್ ಆಚಾರ್ಯ ಕೆ.ಜೆ. ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅನಿತಾ ಉಪಮುಖ್ಯೋಪಾಧ್ಯಾಯಿನಿ ಶ್ರೀಮತಿ ಸೌಮ್ಯ ವಿದ್ಯಾರ್ಥಿಯ ತಂದೆ ಭಾಸ್ಕರ್ ಶರ್ಮ ಬಳ್ಳಾರಿ ತಾಯಿ ಶಕುಂತಲಾ ಭಾಸ್ಕರ್ ಶರ್ಮ ಬಳ್ಳಾರಿ ಉಪಸ್ಥಿತರಿದ್ದರು .

ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಅಂಗಳ – 2026 ಸನ್ಮಾನ ಸಮಾರಂಭದಲ್ಲಿ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಕುತ್ಯಾರು ಶಾಲೆಯ 10ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ 625ಕ್ಕೆ 575 ಅಂಕ ಗಳಿಸಿದ ವಿದ್ಯಾರ್ಥಿ ಬೋಧಾಯನ ಶರ್ಮ ಬಳ್ಳಾರಿ ಇವರಿಗೆ ಸನ್ಮಾನಿಸಲಾಯಿತು.

ಟ್ರಸ್ಟ್ ನ ಕಾರ್ಯದರ್ಶಿ ಗುರುರಾಜ್ ಆಚಾರ್ಯ.ಕೆ.ಜೆ. ಸ್ವಾಗತಿಸಿದರು.ವಿದ್ಯಾಭಾರತಿ ಕರ್ನಾಟಕ ಉಡುಪಿ ಕಾರ್ಯದರ್ಶಿ ಮಹೇಶ ಹೈಕಾಡಿ, ಚಾರ ಕಾರ್ಯಕ್ರಮವನ್ನು ಸಂಘಟಿಸಿ ನಿರೂಪಿಸಿದರು ವಂದಿಸಿದರು.

LEAVE A REPLY

Please enter your comment!
Please enter your name here