ಮಣಿಪಾಲ : ಇತ್ತೀಚಿಗೆ ಮಣಿಪಾಲದಲ್ಲಿ ನಡೆದ ಖಾಸಗಿ ಶಾಲೆಯ ಬಸ್ ಡ್ರೈವರ್ ಅನಾರೋಗ್ಯದ ಕಾರಣ ನಡೆದ ಅವಘಡವನ್ನು ತಪ್ಪಿಸಿ ಹ್ಯಾಂಡ್ ಬ್ರೇಕ್ ಹಾಕಿ ದುರಂತವನ್ನು ತಪ್ಪಿಸಿದ ಅದೇ ರೀತಿ ಚಾಲಕನನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದ ಸತೀಶ್ ಉಪ್ಪೂರು ಅವರನ್ನು ಹೋಮ್ ಡಾಕ್ಟರ್ ಫೌಂಡೇಶನ್ ಇದರ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹೋಂ ಡಾಕ್ಟರ್ ಫೌಂಡೇಶನ್ ಮುಖ್ಯಸ್ಥರಾದ ಡಾ. ಶಶಿಕಿರಣ್ ಶೆಟ್ಟಿ,ಡಾ. ಸುಮಾ ಎಸ್ ಶೆಟ್ಟಿ, ಉದಯ್ ನಾಯ್ಕ್ ಬಂಗಾರಪ್ಪ ರಾಘವೇಂದ್ರ ಪ್ರಭು ಕರ್ವಾಲು ಮುಂತಾದವರು ಉಪಸ್ಥಿತರಿದ್ದರು.

