ಕುಂದಾಪುರ: ಸ್ಪರ್ಧಾ ಸಾರಥಿ ಕೆಎಎಸ್ ಅಕಾಡೆಮಿ, ಕುಂದಾಪುರದಲ್ಲಿ ಸರ್ಕಾರಿ ವಿವಿಧ ಹುದ್ದೆಗಳಿಗಾಗಿ ಆರಂಭವಾದ ಎರಡು ವಾರಗಳ ಉಚಿತ ತರಬೇತಿಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆದ ಮಹಾಂತೇಶ ಜಾಬಗೌಡ ಅವರು ‘From Student to Officer’ ಎನ್ನುವ ವಿಶೇಷ ಉಪನ್ಯಾಸ ತರಗತಿ ತೆಗೆದುಕೊಂಡರು.
ಪರೀಕ್ಷಾ ಟ್ರಿಕ್ಸ್ ಹೇಳಿಕೊಟ್ಟಿದ್ದಲ್ಲದೆ, ಹೇಗೆ ಪರೀಕ್ಷೆಗೆ ಓದಬೇಕು ಅನ್ನೋದನ್ನು ಕೂಡ ತಿಳಿಸಿಕೊಟ್ಟರು. ಸತತ 2.30 ಗಂಟೆಗಳ ಈ ಉಪನ್ಯಾಸದಲ್ಲಿ ಸುಲಭವಾಗಿ ಪರೀಕ್ಷೆ ಎದುರಿಸೋದು ಹೇಗೆ ಎನ್ನುವ ಅವರ ಮಾತುಗಳು ರೋಮಾಂಚನನೀಯವಾಗಿತ್ತು. ಸಂಸ್ಥೆಯ ಸಂಸ್ಥಾಪಕರಾದ ಆದರ್ಶ ಕೆಲ ಉಪಸ್ಥಿತರಿದ್ದರು.

