ಕೆಮ್ಮಣ್ಣು ನಿಟ್ಟೆಯ ವಿದ್ಯಾರ್ಥಿನಿಯ ಅದ್ಭುತ ಸಾಧನೆ

0
14

ಜಪಾನ್ ನಲ್ಲಿ ನಡೆಯಲಿರುವ ಸಕುರಾ ಅಂತಾರಾಷ್ಟ್ರೀಯ ವಿಜ್ಞಾನ ಕಾರ್ಯಕ್ರಮಕ್ಕೆ (INSPIRE MANAK SCHEME – SAKURA SCIENCE PROGRAMME OF JAPAN IN 2026) ಆಯ್ಕೆ

ಕೆಮ್ಮಣ್ಣು ನಿಟ್ಟೆ ನಿವಾಸಿಗಳಾದ ಶಂಕರ್ ಪೂಜಾರಿ ಹಾಗೂ ಸವಿತಾ ದಂಪತಿಯ ಪುತ್ರಿಯಾದ ಮಾನ್ಯ ಶಂಕರ್ ಪ್ರತಿಭಾವಂತ ವಿದ್ಯಾರ್ಥಿನಿಯು ಪ್ರಾಥಮಿಕ ಶಿಕ್ಷಣವನ್ನು DR. N.S.A.M ನಿಟ್ಟೆ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನ JNV ಚಾರ ಹೆಬ್ರಿಯಲ್ಲಿ ಪೂರೈಸಿದ್ದು ಬಾಲ್ಯದಿಂದಲೇ ಶಿಕ್ಷಣ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ತೋರಿದ್ದು, ಪ್ರಸ್ತುತ ಕಾರ್ಕಳ ಕ್ರಿಯೇಟಿವ್ ಕಾಲೇಜು ನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.

ವಿದ್ಯಾರ್ಥಿನಿಯು 7ನೇ ತರಗತಿಯಿಂದಲೇ ರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರದರ್ಶನಗಳು ಹಾಗೂ ಪ್ರಾಜೆಕ್ಟ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2024-25ನೇ ಸಾಲಿನ INSPIRE MANAK SCIENCE AWARDS, ಪ್ರಧಾನ ಮಂತ್ರಿಗಳ “PARIKSHA PE CHARCHA” ಕಾರ್ಯಕ್ರಮ, ರಾಜ್ಯ ಮಟ್ಟದ YOUTH PARLIMENT, ಗೋವಾದ ರಾಷ್ಟ್ರೀಯ ಮಟ್ಟದ YOUTH ADVENTURE PROGRAM ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಶೇಷ ಸಾಧನೆ ಮಾಡಿದ್ದಾರೆ.

ಇದಲ್ಲದೆ, ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ SCIENCE EXHIBITION AND PROJECT COMPETITION ನಲ್ಲಿ ವಿಶೇಷ ಸಾಧನೆ ತೋರಿದ ಇವರು, 2026ರ ಜೂನ್ 28ರಿಂದ ಜುಲೈ 5ರವರೆಗೆ ಜಪಾನ್‌ನಲ್ಲಿ ನಡೆಯಲಿರುವ ವಿಜ್ಞಾನ ಕಾರ್ಯಕ್ರಮಕ್ಕೆ ದೇಶದ ಸುಮಾರು ಸುಮಾರು ಲಕ್ಷಾಂತರ ಸ್ಪರ್ಧಿಗಳ ಪೈಕಿ ಕರ್ನಾಟಕದಿಂದ ಆಯ್ಕೆಯಾದ ನಾಲ್ವರಲ್ಲಿ ಒಬ್ಬರಾಗಿರುವುದು ಜಿಲ್ಲೆಯ ಹೆಮ್ಮೆಯ ವಿಷಯವಾಗಿದ್ದು, ಈಗಾಗಲೇ ಅನೇಕ ಸಂಘ ಸಂಸ್ಥೆಗಳು ಈ ಪ್ರತಿಭಾನ್ವಿತ ವಿದ್ಯಾರ್ಥಿನಿಯ ಸಾಧನೆಗೆ ಅಭಿನಂದಿಸಿದೆ.

LEAVE A REPLY

Please enter your comment!
Please enter your name here