ಕಾರಿಗೆ ಡೀಸೆಲ್​ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ

0
29

ಉಡುಪಿ : ಶಂಕರಪುರದ ಸುಭಾಷ್​ ನಗರದಲ್ಲಿರುವ ಪೆಟ್ರೋಲ್​ ಬಂಕ್​ನಲ್ಲಿ ಶನಿವಾರ ರಾತ್ರಿ ಕಿಡಿಗೇಡಿಗಳು ಕಾರಿಗೆ ಡಿಸೇಲ್​ ತುಂಬಿಸಿ ಬಿಲ್​ ಪಾವತಿಸದೆ ಪರಾರಿಯಾಗಿದ್ದಾರೆ. ಈ ಬಗ್ಗೆ ಪೆಟ್ರೋಲ್​ ಬಂಕ್​ ಮ್ಯಾನೇಜರ್ ಮಂಗಳವಾರ​ ಶಿರ್ವ ಪೊಲೀಸರಿಗೆ ದೂರು ನೀಡಿದ್ದಾರೆ.

ಮೂವರು ಯುವಕರು ಬಿಳಿ ಬಣ್ಣದ ಫೋರ್ಡ್​ ಇಕೋಸ್ಪೋರ್ಟ್​ ಕಾರಿನಲ್ಲಿ ಪೆಟ್ರೋಲ್​ ಬಂಕ್​ಗೆ ಬಂದು ವಾಹನಕ್ಕೆ ಡೀಸೆಲ್​ ಹಾಕುವಂತೆ ಸಿಬ್ಬಂದಿಗೆ ತಿಳಿಸಿದ್ದಾರೆ. ಸಿಬ್ಬಂದಿ 4,711 ರೂ. ಮೌಲ್ಯದ ಡೀಸೆಲ್​ ತುಂಬಿಸಿದ್ದಾರೆ. ಬಳಿಕ ಬಿಲ್​ ಸಿದ್ಧಪಡಿಸುವಂತೆ ಹೇಳಿದ ಆರೋಪಿಗಳು ಹಣ ಪಾವತಿಸದೆ ಏಕಾಏಕಿ ಕಾರನ್ನು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಕಾರಿನಲ್ಲಿದ್ದವರು ತುಳು ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದು, ಆರೋಪಿಗಳು ಮದ್ಯದ ಅಮಲಿನಲ್ಲಿದ್ದಂತೆ ಕಂಡುಬಂದಿದ್ದು, ಕಾರಿನೊಳಗೆ ಬಿಯರ್​ ಬಾಟಲಿಗಳು ಹಾಗೂ ಚಿಪ್ಸ್​ ಪ್ಯಾಕೆಟ್​ಗಳು ಪತ್ತೆಯಾಗಿರುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ. ಕಾರಿನ ಗಾಜುಗಳಿಗೆ ಕಪ್ಪು ಫಿಲ್ಮ್​ ಅಳವಡಿಸಲಾಗಿದ್ದು, ಸಿಸಿಟಿವಿ ದೃಶ್ಯಗಳಲ್ಲಿ ವಾಹನದ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣಿಸದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪತ್ತೆಹಚ್ಚುವುದು ಸವಾಲಾಗಿದೆ.

LEAVE A REPLY

Please enter your comment!
Please enter your name here