ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಮಾಣಿ ವಲಯದ ಇಡ್ಕಿದು ಒಕ್ಕೂಟದ ಮಾಷಾಅಲ್ಲಾ ಸಂಘದ ಫಾತಿಮತ್ ಜೋರ ರವರ ಪತಿ ಅಪಘಾತ ದಿಂದ ದುಡಿಯಲು ಅಶಕ್ತರಾಗಿದ್ದು, ಮೂವರು ಮಕ್ಕಳೊಂದಿಗೆ ಸಂಕಷ್ಟ ದಲ್ಲಿದ್ದು,ಇಡ್ಕಿದು ಒಕ್ಕೂಟದ ವತಿಯಿಂದ ಆಹಾರ ಸಾಮಗ್ರಿ ಕಿಟ್ ನೀಡಲಾಯಿತು.
ಇಡ್ಕಿದು ಒಕ್ಕೂಟದ ಅಧ್ಯಕ್ಷ ರಾದ ದೇಜಪ್ಪ, ಮಾಣಿ ವಲಯ ಮೇಲ್ವಿಚಾರಕಿ ಆಶಾಪಾರ್ವತಿ,ಶೌರ್ಯ ಘಟಕದ ಸದಸ್ಯರಾದ ಪದ್ಮನಾಭ,ಮೋಕ್ಷಿತ್ ಚಂದ್ರಹಾಸ, ಸೇವಾ ಪ್ರತಿನಿಧಿಗಳಾದ ಪುಷ್ಪಲತಾ,ಸುಗಂಧಿನಿ ಉಪಸ್ಥಿತರಿದ್ದರು.

